ಧಾರವಾಡ: ಚೆಂಬೆಳಕು ಖ್ಯಾತಿಯ ಹಿರಿಯ ಕವಿ ಚೆನ್ನವೀರ ಕಣವಿ ಅವರ ಪತ್ನಿ ಶಾಂತಾದೇವಿ ಕಣವಿ ಅವರು ನಿಧನರಾಗಿದ್ದಾರೆ. 87 ವರ್ಷದ ಶಾಂತಾದೇವಿ ಕಣವಿ ಅವರು, ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ನಾಳೆ ಧಾರವಾಡದಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ. 1933ರಲ್ಲಿ ವಿಜಯಪುರದಲ್ಲಿ ಜನಿಸಿದ ಶಾಂತಾದೇವಿ ಅವರು, ಕಥೆ, ಲೇಖನಗಳನ್ನ ಬರೆಯುವ ಮೂಲಕ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ರು.
ಸಂಜೆ ಮಲ್ಲಿಗೆ, ಮರು ವಿಚಾರ, ಜಾತ್ರೆ ಮುಗಿದಿತ್ತು, ಕಸರತ್ತಿಲ್ಲದ ಬರವಣಿಗೆ, ಕಳಚಿಬಿದ್ದ ಪೈಜಾಣ, ನೀಲಿಮಾತೀರ ಕೃತಿಗಳು ಸೇರಿದಂತೆ ನಿಜಗುಣ ಶಿವಯೋಗಿ ಅನ್ನೋ ಮಕ್ಕಳ ಪುಸ್ತಕ ಸಹ ರಚಿಸಿದ್ದಾರೆ. ಇವರ ಬಯಲು ಆಲಯ ಕಥಾ ಸಂಕಲನಕ್ಕೆ 1974ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ ಬಂದಿದೆ. 1987ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಹ ಸಂದಿದೆ.
ಲೇಖಕಿ ಶಾಂತಾದೇವಿ ಕಣವಿ ಅವರ ಕೃತಿಗಳು ಹಿಂದಿ, ಇಂಗ್ಲಿಷ್, ಮಲೆಯಾಳಂಗೂ ಅನುವಾದಗೊಂಡಿವೆ. ಪತಿ ಚನ್ನವೀರ ಕಣವಿ ಅವರು ಕಾವ್ಯದಲ್ಲಿ ಹೆಸರು ಮಾಡಿದ್ರೆ, ಪತ್ನಿ ಕಥಾ ಪ್ರಕಾರದಲ್ಲಿ ಹೆಸರು ಮಾಡಿದವರು.