ಪ್ರಜಾಸ್ತ್ರ ಸುದ್ದಿ
ನವದೆಹಲಿ: ಛತ್ತಿಸಗಡದಲ್ಲಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ 22 ಜನ ಯೋಧರು ಹುತಾತ್ಮರಾಗಿದ್ದಾರೆ. ಇದಕ್ಕೆ ಇಡೀ ದೇಶದ ಜನತೆ ಕಂಬನಿ ಮಿಡಿದಿದೆ. ಈ ಬಗ್ಗೆ ಮಾತ್ನಾಡಿದ ಸಿಆರ್ ಪಿಎಫ್ ಮುಖ್ಯಸ್ಥ ಕುಲದೀಪ ಸಿಂಗ್, 25 ರಿಂದ 30 ಜನ ಮಾವೋವಾದಿಗಳನ್ನ ಹತ್ಯೆ ಮಾಡಲಾಗಿದೆ ಎಂದಿರುವುದು ವರದಿಯಾಗಿದೆ.
ಘಟನೆ ಬಗ್ಗೆ ಟ್ವೀಟ್ ಮಾಡಿರುವ ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ ಗಾಂಧಿ, ಇದೊಂದು ಅಸಮರ್ಥ ನಕ್ಸಲ್ ನಿಗ್ರಹ ಕಾರ್ಯಾಚರಣೆಯಾಗಿದೆ. ನಮ್ಮ ಯೋಧರು ಎಂದೂ ಬಂದೂಕುಗಳಿಗೆ ಸ್ವಇಚ್ಛೆಯಿಂದ ಹುತಾತ್ಮರಾಗುವ ಮನಸ್ಥಿತಿಯುಳ್ಳವರಲ್ಲ ಎಂದು ಕಿಡಿ ಕಾರಿದ್ದಾರೆ. ಅಲ್ದೇ, ಮೃತರ ಅನುಪಾತ 1:1 ಅಂತಾ ಟ್ವೀಟ್ ಮಾಡಿದ್ದಾರೆ.