ರಾಜಕೋಟ್: ನಾಳೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ 2ನೇ ಏಕದಿನ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಭಾರತಕ್ಕೆ ನಾಳಿನ ಪಂದ್ಯ ಅತಿ ಮುಖ್ಯವಾಗಿದೆ. ಯಾಕಂದ್ರೆ, ನಾಳೆ ಏನಾದ್ರು ಆಸೀಸ್ ಗೆಲುವು ಸಾಧಿಸಿತು ಅಂದ್ರೆ ಸರಣಿ ಪ್ರವಾಸಿ ತಂಡದ ಪಾಲಾಗಲಿದೆ. ಹೀಗಾಗಿ ಬ್ಲೂ ಬಾಯ್ಸ್ ಗೆ ನಾಳೆಯ ಪಂದ್ಯ ಡೂ ಆರ್ ಡೈ ಆಗಿದೆ.
ಸೌರಾಷ್ಟ್ರ ಕ್ರಿಕೆಟ್ ಅಂಗಳದಲ್ಲಿ ಹಣಾಹಣಿ ನಡೆಯಲಿದೆ. ವಿಕೆಟ್ ಕೀಪರ್ ರಿಷಭ ಪಂತ್ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ ಕೀಪಿಂಗ್ ಮಾಡಲಿದ್ದಾರೆ. ಉಳಿದಂತೆ ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿದಿದ್ದ ಟೀಂ ಮುಂದುರೆಯಲಿದೆ. ರೋಹಿತ ಹಾಗೂ ಧವನ್ ಜೋಡಿ ಗಟ್ಟಿಯಾಗಿ ಕ್ರಿಸ್ ನಲ್ಲಿ ಉಳಿದ್ರೆ ಬಿಗ್ ಸ್ಕೋರ್ ಬರಲಿದೆ. ಮಧ್ಯಮ ಕ್ರಮಾಂಕದಲ್ಲಿ ಶಿಖರ ಧವನ್ ಹಾಗೂ ಕೆ.ಎಲ್ ರಾಹುಲ 121 ರನ್ ಗಳ ಕಾಣಿಕೆಯನ್ನ ಹಿಂದಿನ ಪಂದ್ಯದಲ್ಲಿ ನೀಡಿದೆ. ಇದೇ ಆಟ ನಾಳೆಯ ಪಂದ್ಯಕ್ಕೂ ಬೇಕಿದೆ.
ಇನ್ನು ಕ್ಯಾಪ್ಟನ್ ವಿರಾಟ ಕೊಹ್ಲಿ ಅಬ್ಬರಿಸಲು ನಿಂತರೆ ರನ್ ಮಳೆ ಸುರಿಯುವುದು ಫಿಕ್ಸ್. ಆಲ್ ರೌಂಡರ್ ರವೀಂದ್ರ ಜಡೇಜಾ ಕಮಾಲ್ ಮಾಡಬೇಕಿದೆ. ಟೀಂ ಇಂಡಿಯಾ ಆಲ್ ರೌಂಡರ್ ಆಟವಾಡುವ ಮೂಲಕ ನಾಳೆಯ ಪಂದ್ಯ ಗೆದ್ದರೆ 3ನೇ ಪಂದ್ಯ ಕುತೂಹಲ ಮೂಡಿಸಲಿದೆ. ಇಲ್ದೇ ಹೋದ್ರೆ ಇಂಡಿಯನ್ ಫ್ಯಾನ್ಸ್ ನಿರಾಸೆಗೊಳ್ಳಲಿದ್ದಾರೆ.
ಆರೆನ್ ಪಿಂಚ್ ಟೀಂ ಮೊದಲ ಪಂದ್ಯದಲ್ಲಿ ಭರ್ಜರಿ 10 ವಿಕೆಟ್ ಗಳ ಅಂತರದಿಂದ ಗೆಲುವು ದಾಖಲಿಸಿದೆ. ಕ್ಯಾಪ್ಟನ್ ಪಿಂಚ್ ಹಾಗೂ ವಾರ್ನರ್ ಜೋಡಿಯ ಅಮೋಘ ಶತಕದಿಂದ ವಿಜಯ ಸಾಧಿಸಿದೆ. ಅಲ್ದೇ, ಬೌಲಿಂಗ್ ನಲ್ಲಿಯೂ ಆಸೀಸ್ ಟೀಂ ಕಮಾಲ್ ಮಾಡಿದೆ. ಹೀಗಾಗಿ ನಾಳೆ ಪಂದ್ಯ ಕ್ರಿಕೆಟ್ ಪ್ರೇಮಿಗಳಿಗೆ ಕುತೂಹಲ ಮೂಡಿಸಿದೆ. ನಾಳೆ ಮಧ್ಯಾಹ್ನ 1.30ಕ್ಕೆ ಪಂದ್ಯ ಶುರುವಾಗಲಿದೆ.