ಕೊಪ್ಪಳ: ಇನ್ ಕೆಎಸ್ಆರ್ ಟಿಸಿ ಬಸ್ ಕಂಡಕ್ಟರ್ ಒಬ್ಬರ ಮಗಳು ಸಾವನ್ನಪ್ಪಿರುವ ಸುದ್ದಿ ಮುಚ್ಚಿಟ್ಟಿರುವ ಅಮಾನವೀಯ ಘಟನೆ ಗಂಗಾವತಿ ಇನ್ ಕೆಎಸ್ಆರ್ ಟಿಸಿ ಬಸ್ ಡಿಪೋದಲ್ಲಿ ನಡೆದಿದೆ.
ಬಸ್ ಡಿಪೋ ಅಧಿಕಾರಿಗಳು ಹೃದಯಹೀನ ವರ್ತನೆಗೆ ಏನು ಹೇಳಬೇಕು ಅನ್ನೋದು ಗೊತ್ತಾಗ್ತಿಲ್ಲ. ಇಷ್ಟೆಲ್ಲ ಮಾಡಿದ ಅಧಿಕಾರಿಗಳು ಅಂತ್ಯಕ್ರಿಯೆ ಬಳಿಕವಾದ್ರೂ ಮನೆಗೆ ಹೋಗಲು ರಜೆ ಕೊಡಿ ಅಂದ್ರೂ ಕೊಡದೆ ಕಂಡಕ್ಟರ್ ಮಂಜುನಾಥ ಎಂಬುವವರಿಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಮಂಜುನಾಥ ಪುತ್ರಿ 11 ವರ್ಷದ ಕವಿತಾ ಬಧುವಾರ ಬೆಳಗ್ಗೆ ಸಾವನ್ನಪ್ಪಿದ್ದಾಳೆ. ಈ ವಿಷ್ಯ ತಿಳಿಸಲು, ಬಾಗಲಕೋಟೆ ಜಿಲ್ಲೆಯ ರಾಂಪೂರದಿಂದ ಕುಟುಂಬಸ್ಥರು ಅವರಿಗೆ ಫೋನ್ ಮಾಡಿದ್ದಾರೆ. ಆದ್ರೆ, ಕೆಲಸದ ಟೈಂನಲ್ಲಿ ಚಾಲಕರು ಮತ್ತು ನಿರ್ವಾಹಕರು ಮೊಬೈಲ್ ಬಳಸಬಾರದು ಅನ್ನೋ ಆಜ್ಞೆ ಇರೋದ್ರಿಂದ, ಮೊಬೈಲ್ ನ್ನು ಡಿಪೋ ಕಚೇರಿಯಲ್ಲಿ ಬಿಟ್ಟಿದ್ದಾರೆ. ಹೀಗಾಗಿ ಮಗಳ ಸಾವಿನ ಸದ್ದಿ ತಿಳಿದಿಲ್ಲ. ಆದ್ರೆ, ಗಂಗಾವತಿ ಡಿಪೋ ಅಧಿಕಾರಿಗಳಿಗೆ ಇದು ಗೊತ್ತಿದ್ದೂ ಅವರಿಗೆ ಮಾಹಿತಿ ನೀಡದೆ ಮುಚ್ಚಿಡುವ ಮೂಲಕ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.
ಗಂಗಾವತಿಯ ಬಸ್ ಡಿಪೋದ ಯಾವ ಅಧಿಕಾರಿ ಈ ರೀತಿ ವರ್ತಿಸಿದ್ದಾನೋ ಅವನಿಗೆ ಯಾವ ಶಿಕ್ಷೆ ನೀಡುತ್ತೀರಿ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ.