ಬೆಂಗಳೂರು: ಚಂದ್ರನ ಅಂಗಳದ ಮೇಲೆ ಚಂದ್ರಯಾನ-2 ಲ್ಯಾಂಡ್ ಆಗುವ ಮೂಲಕ ಇಸ್ರೋ ಹೊಸ ಮೈಲಿಗಲ್ಲು ದಾಖಲಿಸಲು ಪ್ರತಿಯೊಬ್ಬರು ಕಾಯುತ್ತಿದ್ರು. ಆದ್ರೆ, ಸಂಪರ್ಕ ಕಳೆದುಕೊಂಡ ಕಾರಣ ಪ್ರತಿಯೊಬ್ಬರಿಗೂ ನಿರಾಸೆಯಾಗಿದೆ. 2.1 ಕಿಲೋ ಮೀಟರ್ ಹತ್ತಿರ ಇರುವಷ್ಟರಲ್ಲಿ ಸಂಪರ್ಕ ಕಳೆದುಕೊಂಡು ನಿರಾಸೆ ಮೂಡಿಸಿತು.
ಇಡೀ ಭಾರತ ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಕ್ಷಣ ಕೊನೆಗೂ ಬಾರದ ಕಾರಣ, ಪ್ರತಿಯೊಬ್ಬರಿಗೂ ನಿರಾಸೆಯಾಯ್ತು. ಆದ್ರೆ, ಇದನ್ನ ಫೇಲ್ ಅಂತಾ ಹೇಳಲಾಗುವುದಿಲ್ಲ. ಸಂಪರ್ಕ ಕಳೆದುಕೊಂಡಿದೆ. ಈ ಬಗ್ಗೆ ವಿಜ್ಞಾನಿಗಳಲ್ಲಿ ಪ್ರಧಾನಿ ಮೋದಿ ಧೈರ್ಯ ತುಂಬಿದ್ರು. ನಿಮ್ಮ ಈ ಸಾಧನೆ ಕಡಿಮೆಯಲ್ಲ. ನಾವೆಲ್ಲ ಹೆಮ್ಮೆ ಪಡುವ ವಿಷಯ. ನಿಮ್ಮ ಜೊತೆ ನಾವು ಇದ್ದೇವೆ. ಆಲ್ ದಿ ಬೆಸ್ಟ್ ಹೇಳಿದ್ರು.
ಇಸ್ರೋದಿಂದ ಹೊರಡುವ ಮೊದ್ಲು ವಿದ್ಯಾರ್ಥಿಗಳೊಂದಿಗೆ ಒಂದಿಷ್ಟು ಚರ್ಚೆ ನಡೆಸಿದ್ರು. ಕೆಲ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ರು. ಅವರಿಗೆ ಒಳ್ಳೆಯದಾಗ್ಲಿ ಎಂದು ಹೇಳಿ ದೆಹಲಿಗೆ ಪಯಣ ಬೆಳೆಸಿದ್ರು.
ಸಂಪರ್ಕ ಸಿಗದ ಸಿಗ್ನಲ್:
ಇಸ್ರೋದಿಂದ ನೀಡಲಾಗಿದ್ದ ಮಾಹಿತಿ ಪ್ರಕಾರ ಸೆಪ್ಟೆಂಬರ್ 7ರ ಬೆಳಗ್ಗೆ 1.50ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದ್ರೆ, ರೋವರ್ ಪ್ರಗ್ಯಾನ್ ಮಾರ್ಗದಲ್ಲಿ ಸ್ವಲ್ಪ ಬದಲಾವಣೆಯಾದ ಕಾರಣ ಆತಂಕ ಸೃಷ್ಟಿಸಿತು. 2.1 ಕಿಲೋ ಮೀಟರ್ ಅಂತರದಲ್ಲಿ ಪತ ಬದಲಾವಣೆಯಾದ ಕಾರಣ ಲ್ಯಾಂಡ್ ಆದ ಬಗ್ಗೆ ಸಂಪರ್ಕ ಸಿಗ್ಲಿಲ್ಲ. ಹೀಗಾಗಿ ಭಾರತೀಯರಿಗೆ ಸ್ವಲ್ಪ ನಿರಾಸೆಯಾಯ್ತು.