ಬೆಂಗಳೂರು: ಕೋಲಿ ಸಮಾಜವನ್ನ ಎಸ್ಟಿಗೆ ಸೇರ್ಪಡೆ ಮಾಡಬೇಕೆಂದು ವಿಜಯಪುರ, ಕಲಬುರಗಿ ಜಿಲ್ಲೆಯ ನಾಯಕರುಗಳು ಹಲವು ವರ್ಷಗಳಿಂದ ಹೋರಾಟ, ಪ್ರತಿಭಟನೆ, ಮನವಿ ಮಾಡಿಕೊಂಡು ಬರುತ್ತಿದ್ದಾರೆ. ಆದ್ರೆ, ಏನೂ ಪ್ರಯೋಜನವಾಗಿಲ್ಲ. ಇದೀಗ ಈ ಬಗ್ಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದ್ದು, ನಾನೆ ಕೇಂದ್ರ ಸರ್ಕಾರದ ಬಳಿ ಹೋಗಿ ಮತ್ತೊಮ್ಮೆ ಮಾತ್ನಾಡುತ್ತೇನೆ ಅಂತಾ ಹೇಳಿದ್ದಾರೆ.
ಕಲಬುರಗಿಯ ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇತ್ತೀಚೆಗೆ ಸಂಸದ ಉಮೇಶ ಜಾಧವ, ಮಾಜಿ ಸಚಿವ ಮಲೀಕಯ್ಯ ಗುತ್ತೇದಾರ, ಡಾ.ಎ.ಬಿ ಮಾಲಕರೆಡ್ಡಿ ನೇತೃತ್ವದ ನಿಯೋಗ ಸಿಎಂ ಭೇಟಿ ಮಾಡಿದ ಸಮಯದಲ್ಲಿ ಈ ಬಗ್ಗೆ ಭರವಸೆ ನೀಡಿದ್ದಾರೆ.
ಈ ಹಿಂದೆ ನೀವೇ ಕೇಂದ್ರಕ್ಕೆ ಈ ಬಗ್ಗೆ ಕೇಳಿಕೊಂಡಿದ್ದೀರಿ. ಆದ್ರೂ ಏನು ಪ್ರಯೋಜನವಾಗಿಲ್ಲ. ಈಗ್ಲಾದ್ರೂ ಕೂಡಲೇ ಕೋಲಿ ಸಮಾಜವನ್ನ ಎಸ್ಟಿಗೆ ಸೇರಿಸಬೇಕೆಂದು ನಿಯೋಗ ಒತ್ತಾಯಿಸಿದೆ. ಇದಕ್ಕೆ ಸಿಎಂ ಸ್ಪಂದಿಸಿದ್ದು, ಕೇಂದ್ರ ಸರ್ಕಾರದ ಜೊತೆ ಮಾತ್ನಾಡುವುದಾಗಿ ತಿಳಿಸಿದ್ದಾರೆ.