ಅಂತಾರಾಷ್ಟ್ರೀಯ ಸುದ್ದಿ, ಡೆಸ್ಕ್:
ಇಸ್ಲಾಮಾಬಾದ್: ಇಂದು ಬೆಳಗಿನಜಾವ ಇಡೀ ಭಾರತೀಯರು ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಕ್ಷಣ ಸ್ವಲ್ಪದರಲ್ಲಿಯೇ ಮಿಸ್ ಆಯ್ತು. ಇದಕ್ಕೆ ಕೋಟಿ ಕೋಟಿ ಭಾರತೀಯ ಮನಸ್ಸುಗಳು ಮರುಗಿದ್ವು. ಇಸ್ರೋ ಅಧ್ಯಕ್ಷ ಕೆ.ಶಿವನ್ ಕಣ್ಣೀರು ಹಾಕಿದ್ರು. ಇದಕ್ಕಾಗಿಯೇ ಕಾದು ಕುಳ್ತಿದ್ದ ಪಾಕ್ ಮತ್ತೆ ತನ್ನ ನೀಚ ಬುದ್ದಿ ತೋರಿಸಿದೆ.
ಭಾರತಕ್ಕೆ ಅವಮಾನ ಮಾಡುವ ರೀತಿಯಲ್ಲಿ ಟ್ವೀಟ್ ಮಾಡಿದ್ದು, ಯಾವ ಕೆಲಸ ಮಾಡಲು ಬರುವುದಿಲ್ಲವೋ ಅಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಕಾಲೆಳೆದಿದೆ. ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ ಹುಸೇನ ಟ್ವೀಟ್ ನಲ್ಲಿ ಈ ರೀತಿ ಬರೆದುಕೊಂಡಿದ್ದು, ಇಂಡಿಯಾ ಅನ್ನೋ ಬದ್ಲಿಗೆ ಎಂಡಿಯಾ ಎಂದಿದ್ದಾನೆ.
ಅಲ್ದೇ, ಚಂದ್ರನ ಮೇಲೆ ಇಳಿಯಬೇಕಿದ್ದ ಆಟಿಕೆ ಮುಂಬೈನ ಮೇಲೆ ಬಿದ್ದು ವ್ಯರ್ಥವಾಗಿದೆ ಅಂತಾ ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾನೆ. ಇದಕ್ಕೆ ಭಾರತೀಯರು ಸಹ ಸರಿಯಾಗಿಯೇ ಪ್ರತ್ಯುತ್ತರ ನೀಡಿದ್ದಾರೆ.