ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿ 7 ವರ್ಷಗಳ ಕಾಲ ನಿಷೇಧ ಅನುಭವಿಸಿದ ಟೀಂ ಇಂಡಿಯಾ ಮಾಜಿ ಬೌಲರ್ ಶ್ರೀಶಾಂತ್ 2022ರ ಐಪಿಎಲ್ ಗೆ ಎಂಟ್ರಿ ಪಡೆಯುತ್ತಾರಾ ಅನ್ನೋ ಕುತೂಹಲ ಮೂಡಿದೆ. ಈ ಬಾರಿಯ ಐಪಿಎಲ್ ಹರಾಜಿಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಕಳೆದ ವರ್ಷ ಸಹ ಅವರ ಐಪಿಎಲ್ ಹರಾಜಿಗೆ ಇಳಿದಿದ್ದರು. ಆದರೆ, ಯಾವುದೇ ಪ್ರಾಂಚೈಸಿ ಅವರನ್ನು ಖರೀದಿಸಿರಲಿಲ್ಲ. ನಂತರ ಸೈಯದ್ ಮುಸ್ತಾಕ್ ಅಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇರಳ ಪರ ಆಟವಾಡಿದ್ದರು. ಈ ಬಾರಿ 50 ಲಕ್ಷ ಮುಖಬೆಲೆಯೊಂದಿಗೆ ಹರಾಜಿಗೆ ಬಂದಿದ್ದು, ಐಪಿಎಲ್ ಗೆ ರೀ ಎಂಟ್ರಿ ಪಡೀತಾರಾ ಕಾದು ನೋಡಬೇಕಿದೆ.
ಈಗಾಗ್ಲೇ 1,214 ಆಟಗಾರರು ತಮ್ಮ ಹೆಸರನ್ನು ಹರಾಜಿಗೆ ನೋಂದಾಯಿಸಿಕೊಂಡಿದ್ದಾರೆ. ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.