ಆರ್ ಸಿಬಿ-ಸಿಎಸ್ಕೆ ಕದನ

346

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಪಿಎಲ್ 2022 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಇಂದು ಸಂಜೆ ಕದನ ನಡೆಸಲಿವೆ. ಮೊದಲಿನಿಂದಲೂ ಆರ್ ಸಿಬಿ ಹಾಗೂ ಸಿಎಸ್ಕೆ ನಡುವೆ ಭಾರೀ ಪೈಪೋಟಿ ಇದೆ. ಅಭಿಮಾನಿಗಳ ನಡುವೆಯೂ ಭರ್ಜರಿ ಕಾಳಗ ನಡೆಯುತ್ತೆ.

ಎರಡು ಟೀಂಗಳ ನಾಯಕರು ಬದಲಾಗಿದ್ದಾರೆ. ಇನ್ನೊಂದ್ಕಡೆ ಡುಪ್ಲಸಿ ನಾಯಕತ್ವದ ಆರ್ ಸಿಬಿ ಆಡಿರುವ ನಾಲ್ಕು ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದೆ. 1ರಲ್ಲಿ ಸೋತಿದೆ. ಜಡೇಜಾ ನಾಯಕತ್ವದ ಸಿಎಸ್ಕೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಡುಪ್ಲಸಿ ಸಿಎಸ್ಕೆ ತಂಡದಲ್ಲಿ ಆಡಿರುವುದರಿಂದ ಧೋನಿ ಗೇಮ್ ಪ್ಲಾನ್ ಏನಿರಬಹುದು ಅನ್ನೋದು ತಿಳಿದಿರಬಹುದು. ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದು ರಾತ್ರಿ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!