ಪ್ರಜಾಸ್ತ್ರ ಕ್ರೀಡಾ ಸುದ್ದಿ
ಅಹಮದಾಬಾದ್: ಶುಕ್ರವಾರ ರಾತ್ರಿ ಆರ್ ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಪಂದ್ಯದಲ್ಲಿ ಆರ್ ಆರ್ ಗೆದ್ದು ಫೈನಲ್ ಪ್ರವೇಶಿಸಿದೆ. 2008ರಲ್ಲಿ ಚಾಂಪಿಯನ್ಸ್ ಆಗಿದ್ದ ರಾಜಸ್ಥಾನ್ ರಾಯಲ್ಸ್ ಇದೀಗ ಮತ್ತೆ ಫೈನಲ್ ಗೆ ಬಂದಿದ್ದಾರೆ.
ಟಾಸ್ ಗೆದ್ದ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆರ್.ಆರ್ ಸಂಜು ಸ್ಯಾಮ್ಸನ್ ಲೆಕ್ಕಾಚಾರ ಕೈ ಹಿಡಿಯಿತು. ರಾಯಲ್ಸ್ ಬೌಲರ್ ಗಳ ದಾಳಿಗೆ ಬೆಂಗಳೂರು ಆಟಗಾರರ ಪೆವಿಲಿಯನ್ ಪೆರೇಡ್ ನಡೆಸಿದರು. ಹೀಗಾಗಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳ ಸಾಧಾರಣ ಮೊತ್ತ ಸೇರಿಸಿತು. ಹಿಂದಿನ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿದ್ದ ರಜತ್ 58 ರನ್ ಬಾರಿಸಿದ್ದೇ ಹೆಚ್ಚು.
ಕರ್ನಾಟಕದ ಪ್ರಸಿದ್ಧ ಕೃಷ್ಣ, ಒಬ್ಡ್ ಮೊಕಿ ತಲಾ 3 ವಿಕೆಟ್ ಪಡೆದು ಆರ್ ಸಿಬಿಗೆ ಕಂಟಕವಾದರು. ಬೋಲ್ಟ್ ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದರು. ನಂತರ ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ಟೀಂಗೆ ಗೆಲುವು ತಂದು ಕೊಟ್ಟಿದ್ದು ಜೋಸ್ ಬಟ್ಲರ್ ಅಜೇಯರ್ 106 ರನ್ ಗಳ ಕೊಡುಗೆ. 2016ರಲ್ಲಿ ವಿರಾಟ್ ಕೊಹ್ಲಿ ಒಂದೇ ಟೂರ್ನಿಯಲ್ಲಿ 4 ಶತಕ ಗಳಿಸಿದ್ದನ್ನು ಬಟ್ಲರ್ ಸರಿಗಟ್ಟಿದ್ದರು.
ಹೀಗಾಗಿ 18.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿ ಫೈನಲ್ ಗೆ ಲಗ್ಗೆ ಇಟ್ಟರು. ಇದರೊಂದಿಗೆ 14 ವರ್ಷಗಳ ಆರ್ ಸಿಬಿ ಕನಸು ಮತ್ತೆ ಈಡೇರಲಿಲ್ಲ. 15 ಟೂರ್ನಿಗಳಲ್ಲಿ ಒಮ್ಮೆಯೂ ಚಾಂಪಿಯನ್ಸ್ ಆಗದೆ ಹೋದರು. ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಕಪ್ ಗಾಗಿ ಕದನ ನಡೆಯಲಿದೆ.