ವಿಜಯಪುರ: ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಜೋರಾಗಿದ್ದು ಇದಕ್ಕೆ ಇರಾನಿ ಗ್ಯಾಂಗ್ ಕಾರಣ ಅಂತಾ ಹೇಳಲಾಗ್ತಿದೆ. ಈ ಬಗ್ಗೆ ವಿಜಯಪುರ ಪೊಲೀಸ್ ಠಾಣೆ ವತಿಯಿಂದ ಸಾರ್ವಜನಿಕರಿಗೆ ಸಂದೇಶ ನೀಡಲಾಗಿದೆ. ವಿಜಯಪುರ ಜಿಲ್ಲೆಯ ಸುತ್ತಮುತ್ತ ಹಾಗೂ ಇಂಡಿ, ಸಿಂದಗಿ ತಾಲೂಕಿನ ಗ್ರಾಮಗಳ ಸುತ್ತಮುತ್ತ ಈ ಗ್ಯಾಂಗ್ ಕೆಲಸ ಮಾಡ್ತಿದೆ ಎನ್ನಲಾಗ್ತಿದೆ.
ಕಂಬಳಿ ಮತ್ತು ಇತರೆ ಹೊದಿಕೆಗಳನ್ನು ಮಾರಲು ತಮ್ಮ ಬಳಿ ಬಂದಲ್ಲಿ ಅವರ ಗುರುತಿನ ಚೀಟಿ ಹಾಗೂ ವಿಳಾಸವನ್ನು ಖಾತರಿ ಮಾಡಿಕೊಂಡು ಖರೀದಿ ಮಾಡಬೇಕೆಂದು ತಿಳಿಸಲಾಗಿದೆ. ಈ ಇರಾನಿ ಗ್ಯಾಂಗ್ ಕಂಬಳಿ ಮಾರುವ ವೇಷದಲ್ಲಿ ಬಂದು ನಿಮ್ಮ ಮನೆಯ ಸಂಪೂರ್ಣ ವಿವರ ಪಡೆದುಕೊಂಡು ಹೋಗ್ತಾರೆ. ಬಳಿಕ ಕಳ್ಳತನ, ಅತ್ಯಾಚಾರದಂತಹ ಕೃತ್ಯಗಳನ್ನ ಎಸಲಾಗುತ್ತೆ ಅಂತಾ ತಿಳಿಸಲಾಗಿದೆ.
ಈ ಇರಾನಿ ಗ್ಯಾಂಗ್ ಮೇಲೆ ನಿಗಾ ಇಡಲು ರಾಜ್ಯ ಸರ್ಕಾರದ ಗುಪ್ತಚರ ಇಲಾಖೆಯು ತಿಳಿಸಿರುತ್ತದೆ. ಆದ್ದರಿಂದ ಈ ಮಾಹಿತಿಯನ್ನ ಆದಷ್ಟು ಎಲ್ಲಾ ಸಾರ್ವಜನಿಕರಿಗೆ ಹಂಚಿಕೊಳ್ಳುವುದು ಮತ್ತು ಹೊರ ರಾಜ್ಯದ ಮಾರಾಟಗಾರರ ಬಗ್ಗೆ ಮಾಹಿತಿಯನ್ನ ನಿಮ್ಮ ನಿಮ್ಮ ಬೀಟ್ ಸಿಬ್ಬಂದಿಗೆ ಅಥವಾ ವಿಜಯಪುರ ಪೊಲೀಸ್ ಠಾಣೆಗೆ ನೀಡಿ ಅಂತಾ ತಿಳಿಸಲಾಗಿದೆ.