ಪ್ರಜಾಸ್ತ್ರ ಸುದ್ದಿ
ವಿಜಯಪುರ: ಸುದೀರ್ಘ 42 ವರ್ಷಗಳ ಕಾಲ ಭಾರತೀಯ ಮೀಸಲು ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಮಾಂಡೆಂಟ್ ಎಸ್.ಡಿ ಪಾಟೀಲ ಅವರಿಗೆ ಸನ್ಮಾನಿಸಲಾಯಿತು. ನಗರದ ಹೊರವಲಯದಲ್ಲಿರುವ ಐಆರ್ ಬಿ ಕೇಂದ್ರದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ವೇಳೆ ಮಾತನಾಡಿದ ಎಸ್.ಡಿ ಪಾಟೀಲ, ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಹೆತ್ತವರು, ಗುರು ಹಿರಿಯರು, ಹಿರಿಯ ಅಧಿಕಾರಿಗಳು, ಸಿಬ್ಬಂದಿಯ ಸಹಕಾರವನ್ನು ನೆನೆದು ಭಾವುಕರಾದರು. ಅವರೆಲ್ಲರಿಗೂ ಆಭಾರಿಯಾಗಿದ್ದೇನೆ ಎಂದರು.
ಈ ವೇಳೆ ಐಆರ್ ಬಿ ಡೆಪ್ಯೂಟಿ ಕಮಾಡೆಂಟ್ ಜೆ.ರೂಪೇಶ್, ಸಹಾಯಕ ಕಮಾಂಡೆಂಟ್ ಗಳಾದ ಗುರುನಾಥ್ ಶರಣಬಸವ, ನಾಗೇಶ್ ಯಡಾಲ್, ಲಕ್ಷ್ಮಣ್ ನಾಯ್ಕ್, ಇನ್ಸ್ ಪೆಕ್ಟರ್ ಗಳಾದ ವಿಜಯ್ ಠಕ್ಕಣ್ಣವರ್, ಮಹಾಂತೇಶ್ ಇಟ್ಟಿ, ಪ್ರಸನ್ನ ಲಬ್ಬಾ, ಹುಸೇನ್ ಲಾಲಕೋಟಿ, ಕಲ್ಲನಗೌಡ ಪಾಟೀಲ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.