ಪ್ರಜಾಸ್ತ್ರ ಸುದ್ದಿ
ಕೊಪ್ಪಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೋದ ಕಡೆಯಲ್ಲೆಲ್ಲ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ಹೊರ ಹಾಕಿದ್ದಾರೆ.
ಕುಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೂ ಟಿಕೆಟ್ ಸಿಗುತ್ತೆ ಅನ್ನೋ ಆಸೆ ಇರುತ್ತೆ. ಏಕಾಏಕಿ ಹೆಸರು ಘೋಷಣೆ ಮಾಡಿದರೆ ಅರ್ಜಿ ಹಾಕಿದವರಿಗೆ ತೊಂದರೆಯಾಗುತ್ತದೆ. ಒಂದು ಕಡೆ ಅರ್ಜಿಗಳ ಇತ್ಯರ್ಥವಾಗಿಲ್ಲ. ಹೀಗಿರುವಾಗಿ ಮತ್ತೊಂದು ಕಡೆ ಇಂತವರಿಗೆ ವೋಟ್ ಹಾಕಿ ಎನ್ನುವುದು ಸರಿಯಲ್ಲ ಎಂದರು.
ಸಿದ್ದರಾಮಯ್ಯನವರು ಹೆಸರು ಘೋಷಣೆ ಮಾಡಿದ್ದು ತಪ್ಪು ಅನ್ನುತ್ತೀರಾ ಎಂದು ಪತ್ರಕರ್ತರು ಪ್ರಶ್ನೆ ಕೇಳಿದರೆ, ನಾನು ತಪ್ಪು ಎನ್ನಬೇಕು. ನೀವು ಅಲ್ಲಿ ಮತ್ತೇನಾದರೂ ಟ್ವಿಸ್ಟ್ ಮಾಡಿ ಕೇಳಬೇಕು. ಇದೆಲ್ಲ ಸರಿಯಿರಲ್ಲ ಎಂದು ಜಾರಿಕೊಂಡರು.