ಜು.13ಕ್ಕೆ ಜಗ ನಡೆಯಲಿ ಬುದ್ಧನ ಕಡೆ ಕಾರ್ಯಕ್ರಮ

297

ಪ್ರಜಾಸ್ತ್ರ ಸುದ್ದಿ

ಮೈಸೂರು: ನಗರದ ತನುಮನ ಸಂಸ್ಥೆ ವತಿಯಿಂದ ಜುಲೈ 13ರಂದು, ಜಗ ನಡೆಯಲಿ ಬುದ್ಧನ ಕಡೆ ಹಾಗೂ ಬುದ್ಧನಾಡ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ನಗರದ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಸಂಜೆ 5.30ಕ್ಕೆ, ನಾಡಿನ ಖ್ಯಾತ ಗಾಯಕ ಲಕ್ಷ್ಮಿರಾಮ್ ಅವರ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.

ಪೂಜ್ಯ ಜ್ಞಾನ ಪ್ರಕಾಶ ಸ್ವಾಮಿಜೀ ಅವರು ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಸಂಸದ ಆರ್.ಧ್ರುವನಾರಾಯಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಮಹಾಪೌರ ಪುರುಷೋತ್ತಮ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಡಾ.ಮೈಸೂರು ಗುರುರಾಜ್. ಡಾ.ಕೆ.ಪಿ ಮಹಾದೇವಯ್ಯ, ತುಂಬಲ ರಾಮಣ್ಣ, ಕೃಷಿ ವಿಜ್ಞಾನಿ ಡಾ.ಹೆಚ್.ಎಮ್.ಪಲ್ಲವಿ, ವಕೀಲ ವಿಷ್ಣುವರ್ಧನ್ ಸೇರಿ ವಿವಿಧ ಕ್ಷೇತ್ರಗಳ 20 ಸಾಧಕರಿಗೆ ಬುದ್ಧನಾಡ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಗಾಯಕ ಲಕ್ಷ್ಮಿರಾಮ್, ಲಾಸ್ಯ, ಮಾದೆಶ್ ಚಿಕ್ಕನಂದಿ, ಗಣೇಶ್ ಮಲಾರ ಮುಂತಾದವರು ಬುದ್ಧ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ವಿ.ಸೋಮಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!