ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕೇಂದ್ರ ಮೂರು ಕೃಷಿ ಕಾಯ್ದೆಗಳನ್ನ ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರ್ತಿರುವ ರೈತರು, ಜನವರಿ 26 ಗಣರಾಜ್ಯೋತ್ಸವದಂದು ಟ್ಯಾಕ್ಟರ್ ರ್ಯಾಲಿಗೆ ಮುಂದಾಗಿದ್ದಾರೆ. ಇದಕ್ಕಾಗಿ ಸಕಲ ರೀತಿಯಿಂದ ಸಿದ್ಧತೆ ಮಾಡಿಕೊಂಡಿದ್ದಾರೆ.
ಸಿಂಗು ಹಾಗೂ ಟಿಕ್ರಿ ಗಡಿಯಿಂದ ಪ್ರಾರಂಭವಾಗು ರ್ಯಾಲಿ ವೇಳೆ ರೈತರು ತಮ್ಗೆ ತಾವೇ ಮಾರ್ಗಸೂಚಿಗಳನ್ನ ಪಾಲಿಸಲು ಸಿದ್ಧರಾಗಿದ್ದಾರೆ. ಹೀಗಾಗಿ ರ್ಯಾಲಿಯಲ್ಲಿ ಪಾಲ್ಗೊಳ್ಳುವರು ಕಡ್ಡಾಯವಾಗಿ ಇದನ್ನ ಪಾಲಿಸಬೇಕಾಗಿದೆ.
ರ್ಯಾಲಿ ವೇಳೆ ಆಯುದ್ಧ ಬಳಕೆ ಮಾಡುವಂತಿಲ್ಲ
ಪ್ರಚೋದಿಸುವ ಬ್ಯಾನರ್, ಬೋರ್ಡ್ ಹಿಡಿಯುವಂತಿಲ್ಲ
ಮದ್ಯಪಾನ ಮಾಡಿಕೊಂಡು ಬರುವಂತಿಲ್ಲ
ರಸ್ತೆ ನಿಯಮಗಳನ್ನ ಪಾಲಿಸಿಕೊಂಡು ಬರುವುದು ಸೇರಿದಂತೆ ಪ್ರಮುಖ ಮಾರ್ಗಸೂಚಿಗಳನ್ನ ಅಳವಡಿಸಿಕೊಂಡು ಕೇಂದ್ರದ ವಿರುದ್ಧದ ಹೋರಾಟ ಮುಂದುವರೆಸ್ತಿದ್ದಾರೆ. ಸಿಂಗು ಗಡಿಯಿಂದ ಶುರುವಾಗುವ ರ್ಯಾಲಿ 62 ಕಿಲೋ ಮೀಟರ್ ಇದೆ. ಟಿಕ್ರಿ ಗಡಿಯಿಂದ ನಡೆಯುವ ರ್ಯಾಲಿ 63 ಕಿಲೋ ಮೀಟರ್ ಇದೆ ಎಂದು ತಿಳಿಸಲಾಗಿದೆ.