ಪ್ರಜಾಸ್ತ್ರ ಸುದ್ದಿ
ಇಂಡಿ: ಜಮೀನಿನಲ್ಲಿದ್ದ ಪಂಪ್ ಸಟ್ ಕಳ್ಳತನಕ್ಕೆ ಬಂದ ದುಷ್ಕರ್ಮಿಗಳು, ತೊಗರಿ ರಾಶಿಗೆ ಬೆಂಕಿ ಹಚ್ಚಿ ಹೋಗಿದ್ದಾರೆ. ಇದ್ರಿಂದಾಗಿ ರೈತನ ಲಕ್ಷಾಂತರ ರೂಪಾಯಿ ಮೌಲ್ಯದ ತೊಗರಿ ಸಂಪೂರ್ಣವಾಗಿ ಸುಟ್ಟು ಹೋಗಿದೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಪಡನೂರ ಗ್ರಾಮದಲ್ಲಿ ಮಲ್ಲು ಅವರಾದಿ ಎಂಬುವರ ಜಮೀನಿನಲ್ಲಿ ಇಂತಹದೊಂದು ಘಟನೆ ನಡೆದಿದೆ. ದುಷ್ಕರ್ಮಿಗಳ ದುಷ್ಕೃತ್ಯಕ್ಕೆ ಸುಮಾರು 35-40 ಕ್ವಿಂಟಾಲ್ ತೊಗರಿಗೆ ಬೆಂಕಿಗೆ ಆಹುತಿಯಾಗಿದೆ.
ದುಷ್ಕರ್ಮಿಗಳು ಕೊಳವೆ ಬಾವಿ ಕೇಬಲ್ ಕತ್ತರಿಸಿ ತೆಗೆದುಕೊಂಡು ಪರಾರಿಯಾಗಿದ್ದಾರೆ. ಅದನ್ನಷ್ಟೇ ಮಾಡಿದ್ರೆ ಹೇಗೋ ಸಹಿಸಿಕೊಳ್ಳಬಹುದಿತ್ತು. ಆದ್ರೆ, ನೀಚರು ರೈತನ ಬದುಕಿನ ಮೇಲೆಯೇ ಹೊಡೆದು ಹೋಗಿದ್ದಾರೆ. ಈ ಕುರಿರು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.