ನವದೆಹಲಿ: ಮಾರ್ಚ್ 22, ಭಾನುವಾರ ಇಡೀ ದೇಶ ಜನತಾ ಕರ್ಫ್ಯೂ ಆಚರಿಸಿದೆ. ಅದನ್ನ ಯಶಸ್ಸು ಸಹ ಮಾಡಿದೆ. ಇದೀಗ ಕೇಂದ್ರವು ಆರ್ಥಿಕ ನೆರವು ಘೋಷಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ವಿತ್ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಇಡೀ ಭಾರತ ಸ್ತಬ್ಧವಾಗಿದೆ. ಇದೀಗ ಜನರು ಆರ್ಥಿಕ ನಿರೀಕ್ಷೆಯಲ್ಲಿದ್ದಾರೆ. ಕರೋನಾ ವಿರುದ್ಧ ಹೋರಾಡಲು ಜನತೆಗೆ ಆರ್ಥಿಕ ನೆರವು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಮಾರ್ಚ್ 31ರ ತನಕ ಸಂಪೂರ್ಣವಾಗಿ ಲಾಕ್ ಡೌನ್ ಪರಿಸ್ಥಿತಿಯಿದೆ. ಇದನ್ನು ನಿಭಾಯಿಸಲು ಜನತೆಗೆ ಆರ್ಥಿಕ ನೆರವು ನೀಡಬೇಕು ಎಂದು ಟ್ವೀಟ್ ಮೂಲಕ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.