ಅಹಮದಾಬಾದ್: ಭಾನುವಾರ ಜನತಾ ಕರ್ಫ್ಯೂ ಆಚರಿಸಲಾಗಿದೆ. ಅಂದು ಸಂಜೆ 5 ಗಂಟೆಗೆ ಮನೆ ಬಾಗಿಲು, ಕಿಟಕಿ, ಬಾಲ್ಕನಿ ಹತ್ತಿರ ನಿಂತು ಚಪ್ಪಾಳೆ ತಟ್ಟಿ, ಕರೋನಾ ವಿರುದ್ಧ ಸತತ ಸೇವೆ ಸಲ್ಲಿಸ್ತಿರುವವರಿಗೆ ಧನ್ಯವಾದ ಸಲ್ಲಿಸಲು ಮೋದಿ ಕರೆ ನೀಡಿದ್ರು. ಆದ್ರೆ, ಗುಜರಾತನ ಅಹಮದಾಬಾದ್ ನಲ್ಲಿ ಸಾಮೂಹಿಕವಾಗಿ ಹೊರ ಬಂದು ಗಂಟೆ, ಜಾಗಟೆ ಬಾರಿಸಲಾಗಿದೆ.
ಆದ್ರೆ, ಪ್ರಧಾನಿ ಮೋದಿ ನೀಡಿದ್ದ ಕರೆಯನ್ನ ಉಲ್ಲಂಘನೆ ಮಾಡಿದ 40 ಜನರ ವಿರುದ್ಧ ಕೇಸ್ ಬಿದ್ದಿದೆ. ಬೀದಿಗಿಳಿದು ಜನತಾ ಕರ್ಫ್ಯೂ ಸಂಭ್ರಮಿಸಿದ್ದಾರೆ. ಆ ದಿನ ಅಹಮದಾಬಾದ್ ನಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ರೂ ಕ್ಯಾರೆ ಅಂದಿಲ್ಲ. ಹೀಗಾಗಿ 40 ಮಂದಿ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಆಶಿಶ್ ಭಾಟಿಯಾ ತಿಳಿಸಿದ್ದಾರೆ.
ಈ ಘಟನೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇವರ ತಲೆಯಲ್ಲಿ ಅದೇನ್ ಇದೆಯೋ ಯಾರಿಗೆ ಗೊತ್ತು. ನಿಮ್ಮ ಮನೆಯಲ್ಲಿಯೇ ನಿಂತು ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ ಅಂದ್ರೆ ಊರು ತುಂಬಾ ಸುತ್ತುತ್ತಾರೆ ಅಂದ್ರೆ ನಿಜಕ್ಕೂ ಬುದ್ದಿಗೇಡಿಗಳು ಇವರು. ಅವರು ಮಾಡಿದ ತಪ್ಪಿಗೆ ಇದೀಗ ಕೇಸ್ ಎದುರಿಸಬೇಕಾಗಿದೆ.