ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಶಾಸಕ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗ್ತಿದೆ. ಸಚಿವ ಎಸ್.ಟಿ ಸೋಮಶೇಖರ, ಸಿಡಿ ಮಾಡಿಸಿದ್ದು ಕಾಂಗ್ರೆಸ್ ನವರು ಎಂದು ಗಂಭೀರ ಆರೋಪ ಮಾಡಿದ್ದು, ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ತಿರುಗೇಟು ನೀಡಿದ್ದಾರೆ.
ರಾಜಕೀಯದಲ್ಲಿ ಷಡ್ಯಂತ್ರ ಸಾಮಾನ್ಯ. ನಿಮ್ಮ ಪ್ಯಾಂಟು, ಶರ್ಟು ಬಿಚ್ಚಲು ಕಾಂಗ್ರೆಸ್ ನವರು ಹೇಳಿದ್ರಾ ಎಂದು ಡಿಕೆಶಿ ಕೇಳಿದ್ದಾರೆ. ರಮೇಶ ಜಾರಕಿಹೊಳಿ 5 ಸಲ ಶಾಸಕರಾಗಿದ್ದಾರೆ. ಅವರೇನು ದಡ್ಡರಾ? ನಕಲಿ ಸಿಡಿಯಾಗಿದ್ದರೆ ತನಿಖೆ ಯಾಕೆ ಮಾಡಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಒಂದು ಕಾಲದಲ್ಲಿ ನಾವು ಜೊತೆಗಿದ್ದವರು. ರಮೇಶಗೆ ಒಳ್ಳೆಯದು ಬಯಸಿದವನು ನಾನು. ಏನೇನೋ ಹುಚ್ಚುಹುಚ್ಚಾಗಿ ಮಾತ್ನಾಡಿದ ಮೇಲೆ ಸುಮ್ಮನಾದೆ. ಯಡಿಯೂರಪ್ಪ ಬಗ್ಗೆ, ಕನ್ನಡಿಗರ ಬಗ್ಗೆ ಮಾತ್ನಾಡಲು ನಾವು ಹೇಳಿಕೊಟ್ಟಿದ್ದಾ? ಯತ್ನಾಳ ಅವರೆ ಹೇಳ್ತಿದ್ದಾರೆ ಬ್ಲ್ಯಾಕ್ ಮೇಲ್ ಮಾಡಿ ಸಚಿವರಾಗಿದ್ದಾರೆ ಎಂದು. ಅದಕ್ಕೆ ಉತ್ತರ ನೀಡಲಿ ಎಂದು ತಿರುಗೇಟು ನೀಡಿದರು.