ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಬಿಸಿ ತುಪ್ಪವಾಗಿ ಪರಿಣಮಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಬುಧವಾರ ಮತ್ತೆ ಗುಡುಗಿದ್ದಾರೆ. ಕಲಾಪದ ವೇಳೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ರು. ಹೊರ ಬಂದ್ಮೇಲೆ ಸಿಡಿ ಬಗ್ಗೆ ಹೇಳಿ ಮತ್ತಷ್ಟು ಕುತೂಹಲ ಮೂಡಿಸಿದರು.
ಶಾಸಕ ರಮೇಶ ಜಾರಕಿಹೊಳಿ ಸಿಡಿ ಗಲಾಟೆ ನಡುವೆ, ಶಾಸಕ ಯತ್ನಾಳ ಒಂದಲ್ಲ ಎರಡಲ್ಲ ಅಪ್ಪ, ಮಕ್ಕಳದ್ದೂ ಸೇರಿದಂತೆ ಬರೋಬ್ಬರಿ 23 ಸಿಡಿಗಳಿವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಮುಂದುವರೆದು ಮಾತ್ನಾಡಿದ ಅವರು, ಈಗ ಬಂದಿರುವ ಸಿಡಿಗೂ ನಾನು ಹೇಳ್ತಿರುವ ಸಿಡಿಗೂ ಸಂಬಂಧವಿಲ್ಲ. ಎರಡೂ ಬೇರೆ ಬೇರೆ ಸಿಡಿಗಳು ಎಂದಿದ್ದಾರೆ. ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಸಿಡಿ ಗಲಾಟೆ ಮತ್ತಷ್ಟು ಜೋರಾಗುವ ಲಕ್ಷಣಗಳಿವೆ.