ವಿಜಯಪುರ: ಕರೋನಾ ಲಾಕ್ ಡೌನ್ ನಲ್ಲಿ ಗುಟ್ಕಾ ಮಾರಾಟ ಮಾಡುತ್ತಿದ್ದೀರಿ ಎಂದು ಕಿರಾಣಿ ಅಂಗಡಿ ಮಾಲೀಕನಿಗೆ ಆವಾಜ್ ಹಾಕಿ, 10 ಸಾವಿರ ಬೇಡಿಕೆಯಿಟ್ಟಿದ್ದ ವಸೂಲಿ ಪತ್ರಕರ್ತನನ್ನ ಬಂಧಿಸಲಾಗಿದೆ. ಈ ಬಗ್ಗೆ ಇಂದು ಪೊಲೀಸ್ ಅಧೀಕ್ಷಕರಾದ ಅನುಪಮ ಅಗರ್ವಾಲ್ ಅವರು ತಿಳಿಸಿದ್ದಾರೆ.
ವಿಜಯಪುರದ ದೇವರಗೆಣ್ಣೂರ ಗ್ರಾಮದ ಸೋಮಪ್ಪ ಪೂಜಾರಿಯವರ ಕಿರಾಣಿ ಅಂಗಡಿ ಹೋಗಿದ್ದ ಶಮಶುದ್ದೀನ ನಿಮ್ಮ ಅಂಗಡಿಯಲ್ಲಿ ಅಕ್ರಮವಾಗಿ ಗುಟ್ಕಾ ಮಾರಾಟ ಮಾಡ್ತಿದ್ದೀರಿ. ಇದನ್ನು ಮಾಧ್ಯಮದಲ್ಲಿ ಪ್ರಸಾರ ಮಾಡಬಾರದು ಎಂದರೆ ನನಗೆ 10 ಸಾವಿರ ಕೊಡಬೇಕು ಎಂದು ಬ್ಲ್ಯಾಕ್ ಮಾಡಿದ್ದಾನೆ.
ಇನ್ನು ಸೋಮಪ್ಪನಿಗೆ ಹೆದರಿಸಿ 2 ಸಾವಿರ ರೂಪಾಯಿ ವಸೂಲಿ ಮಾಡಿ, ಜೀವ ಬೆದರಿಕೆ ಹಾಕಿದ್ದಾನೆ. ಈ ಕುರಿತು ಸೋಮಪ್ಪ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ದೂರಿನ ಅನ್ವಯ ಶಮಶುದ್ದೀನ ವಿರುದ್ಧ 504, 506, 384 ಐಪಿಸಿ ಅಡಿಯಲ್ಲಿ ಕೇಸ್ ದಾಖಲಿಸಿ ಬಂಧಿಸಲಾಗಿದೆ. ಜಿಲ್ಲೆಯಲ್ಲಿ ವಸೂಲಿ ಹಾಗೂ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ.