ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ಕರೋನಾ ಲಾಕ್ ಡೌನ್ ನಿಂದಾಗಿ ಸಾಕಷ್ಟು ಜನರು ಸಂಕಷ್ಟದಲ್ಲಿ ಇದ್ದಾರೆ. ಇವರಿಗೆ ಹಲವಾರು ಮಂದಿ ಸಹಾಯ ಮಾಡ್ತಿದ್ದಾರೆ. ಸಿನಿ ಕಾರ್ಮಿಕರಿಗೆ, ಹಿರಿಯ ಕಲಾವಿದರಿಗೆ ಸ್ಟಾರ್ ನಟರು ತಮ್ಮ ಫೌಂಡೇಷನ್ ಮೂಲಕ ನೆರವು ನೀಡ್ತಿದ್ದಾರೆ. ಅದರಲ್ಲಿ ನಟ ಉಪೇಂದ್ರ ಫೌಂಡೇಷನ್ ಸಹ ಒಂದು.
ಇದೀಗ ನಟ ಉಪೇಂದ್ರ ಫೌಂಡೇಷನ್ ಮೂಲಕ ಕಬ್ಜ ತಂಡ ಸಿನಿಮಾ ಕಾರ್ಮಿಕರಿಗೆ ಫುಡ್ ಕಿಟ್ ನೀಡಲು ಸಜ್ಜಾಗಿದೆ. ಇದಕ್ಕಾಗಿ ನಿರ್ದೇಶಕ ಆರ್.ಚಂದ್ರು ಹಾಗೂ ಕಬ್ಜ ಟೀಂ 1 ಲಕ್ಷ ರೂಪಾಯಿ, ದಿನಸಿ ಹಾಗೂ ತರಕಾರಿ ಕಿಟ್ ನೀಡಿದೆ.