ಉ.ಕ ರೈತರಿಂದ ಅಹೋರಾತ್ರಿ ಧರಣಿ: ಕ್ಯಾರೆ ಅನ್ನದ ನಾಯಕರು

422

ಬೆಂಗಳೂರು: ಕಳಸಾ ಬಂಡೂರಿ, ಮಹದಾಯಿ ಯೋಜನೆಯನ್ನ ಅನುಷ್ಠಾನಕ್ಕೆ ಆಗ್ರಹಿಸಿ, ಉತ್ತರ ಕರ್ನಾಟಕ ಭಾಗದ ರೈತರು ನಿನ್ನೆಯಿಂದ ಬೆಂಗಳೂರು ಚಲೋ ಪ್ರತಿಭಟನೆ ನಡೆಸಿದ್ರು. ಅಲ್ದೇ, ಕಳೆದ ರಾತ್ರಿಯಿಂದ ಅಹೋರಾತ್ರಿ ಧರಣಿ ನಡೆಸಿದ್ರೂ ಕ್ಯಾರೆ ಅಂದಿಲ್ಲ. ಇಂದು 2ನೇ ದಿನಕ್ಕೆ ಕಾಲಿಟ್ಟಿದೆ.

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈತರು, ಮಹಿಳೆಯರು, ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಅದನ್ನ ಇಂದು ಸಹ ಮುಂದುವರೆಸಿದ್ದಾರೆ. ಇಷ್ಟಾದ್ರೂ ಯಾವೊಬ್ಬ ಜನನಾಯಕನು ಇವರ ಬಳಿ ಸುಳಿಯದೆ ತಮ್ಮ ನಿಲುವು ಏನು ಅನ್ನೋದು ಸ್ಪಷ್ಟ ಪಡಿಸಿದ್ದಾರೆ.

ಕಳಸಾ ಬಂಡೂರಿ, ಮಹದಾಯಿ ಯೋಜನೆಗೆ ಅಧಿಸೂಚನೆ ಹೊರಡಿಸಬೇಕು. ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಬೇಕೆಂದು ಒತ್ತಾಯಿಸಿ ಕೊರೆಯುವ ಚಳಿಯಲ್ಲೂ ಪ್ರತಿಭಟನೆ ನಡೆಸಿದ್ರು. ಅಲ್ದೇ ಅದನ್ನ ಇನ್ನೂ ಸಹ ಮುಂದುವರೆಸಿದ್ದಾರೆ. ಇಂದು ಇವರ ಕೂಗು ಕೇಳಲು ಯಾರು ಬರ್ತಾರೆ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!