ಮಹದಾಯಿ ಹೋರಾಟ ಹಿಂದಕ್ಕೆ.. ಕಾರಣವೇನು ಗೊತ್ತಾ?

308

ಬೆಂಗಳೂರು: ಕಳೆದ ಮೂರು ದಿನಗಳಿಂದ ಹಗಲು ರಾತ್ರಿ, ಮಳೆ ಎನ್ನದೆ ಕಳಸಾ ಬಂಡೂರಿ ಹಾಗೂ ಮಹದಾಯಿ ಅಧಿಸೂಚನೆಗಾಗಿ ಹೋರಾಟ ಮಾಡ್ತಿದ್ದ ರೈತರು ಪ್ರತಿಭಟನೆಯನ್ನ ಹಿಂದಕ್ಕೆ ತೆಗೆದುಕೊಂಡಿದ್ದಾರೆ.

ಪ್ರತಿಭಟನೆ ಮಾಡಲು ಮುಂದಾದ್ರೆ ಹೊಡೆಸ್ತೀರಿ. ಕೊಲೆ ಮಾಡಿಸ್ತೀರಿ ಎಂದು ರೈತ ಮುಖಂಡ ವಿರೇಶ ಗಂಭೀರ ಆರೋಪ ಮಾಡಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ರಾಜ್ಯಪಾಲರ ಭೇಟಿ ಸಿಗದೆ, ಅವರ ವಿಶೇಷ ಕರ್ತವ್ಯಾಧಿಕಾರಿಗೆ ಮನವಿ ಸಲ್ಲಿಸಿ ವಾಪಸ್ ನಡೆದ್ರು.

ಇನ್ನು ಇಂದು ಬೆಳಗ್ಗೆ ಡಿಸಿಎಂ ಗೋವಿಂದ ಕಾರಜೋಳ ಪ್ರತಿಭಟನಾ ಸ್ಥಳಕ್ಕೆ ಬಂದ್ರು. ಈ ವೇಳೆ ರಾಜ್ಯಪಾಲರ ಭೇಟಿಗೆ ಅವಕಾಶ ಮಾಡಿಕೊಡಿ ಅಂತಾ ಕೇಳಿಕೊಂಡ್ರು. ಈ ಬಗ್ಗೆ ಅವರು ಏನೋ ಪ್ರತಿಕ್ರಿಯೆ ನೀಡದೆ, ಸಂಧಾನ ವಿಫಲವಾದ ಪರಿಣಾಮ ಅಲ್ಲಿಂದ ಹೊರಟು ಹೋದ್ರು.




Leave a Reply

Your email address will not be published. Required fields are marked *

error: Content is protected !!