ಶಿಸ್ತು ಸಮಿತಿ ನೋಟಿಸ್ ಗೆ ಯತ್ನಾಳ ಉತ್ತರ

393

ವಿಜಯಪುರ: ನೆರೆ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ, ಅವರದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತ್ನಾಡಿರುವುದಕ್ಕೆ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿತ್ತು. ಅದಕ್ಕೆ ಇದೀಗ ಅವರು ಉತ್ತರಿಸಿದ್ದಾರೆ.

ನಾನು ಕ್ಷಮೆ ಕೇಳಿಲ್ಲ. ಯಾಕಂದ್ರೆ, ಪಕ್ಷಕ್ಕೆ, ಪ್ರಧಾನಿ ಮೋದಿಗೆ, ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಅವರಿಗೆ ಮುಜುಗರ ತರುವ ಕೆಲಸ ಮಾಡಿಲ್ಲ. ಶಾಸಕನಾಗಿ, ಸಂಸದನಾಗಿ ಕೆಲಸ ಮಾಡಿದ ಅನುಭವ ಇದೆ. ಕ್ಷೇತ್ರದ ಜನರ ನೋವು ನೋಡಿ, ತಡಿಯಲಾರದೆ ಮಾತ್ನಾಡಿದ್ದೇನೆ. ಪಕ್ಷ ನನ್ಗೆ ತಾಯಿ ಇದ್ದಂತೆ ಎಂದು ಹೇಳಿದ್ದಾರೆ.

ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ರೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಪಕ್ಷಕ್ಕೆ, ನಾಯಕರಿಗೆ ಮುಜುಗರ ತರುವ ಕೆಲಸ ಮಾಡಿಲ್ಲ. ನನ್ನ ಮಿತಿಯೊಳಗೆ ಮಾತ್ನಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!