ಸರ್ಕಾರಕ್ಕೆ ಕಾಮೇಗೌಡರ ಚಿಕ್ಕ ಮನವಿ

316

ಪ್ರಜಾಸ್ತ್ರ ಸುದ್ದಿ

ಮಂಡ್ಯ: ಮುಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡರ ಸಾಧನೆ ಬಗ್ಗೆ, ಪ್ರಧಾನಿ ಮೋದಿ ಪ್ರಸ್ತಾಪ ಮಾಡಿದ್ಮೇಲೆ ಇವರ ಚರ್ಚೆ ಜೋರಾಗಿ ನಡೆದಿದೆ. 16 ಕೆರೆಗಳನ್ನ ನಿರ್ಮಿಸಿ ಕರ್ನಾಟಕದಲ್ಲಿ ಒಂದಿಷ್ಟು ಹೆಸರು ಮಾಡಿದ್ರು. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರ ಮುಡಿಗೇರಿವೆ.

ಪ್ರಧಾನಿ ಮೋದಿ ಮನ್ ಕೀ ಬಾತ್ ನಲ್ಲಿ ಕಾಮೇಗೌಡರ ಹೆಸರು ಪ್ರಸ್ತಾಪಿಸಿದ್ಮೇಲೆ ರಾಷ್ಟ್ರವ್ಯಾಪ್ತಿ ಹರಡಿತು. ಇಂತಹ 80 ವರ್ಷದ ಸಾಧಕ ಸರ್ಕಾರಕ್ಕೆ ಒಂದು ಮನವಿ ಮಾಡಿಕೊಂಡಿದ್ದು, ತಮಗೊಂದು ಉಚಿತ ಬಸ್ ಪಾಸ್ ನೀಡಬೇಕೆಂದು ಕೇಳಿದ್ದಾರೆ. ಇವರ ಮುಗ್ಧತೆ ಎಷ್ಟಿದೆ ಅನ್ನೋದಕ್ಕೆ ಸಾಕ್ಷಿಯಿದು.

ಬಸ್ ಪಾಸ್ ಮೂಲಕ ನಾಡಿನ ದೇವಸ್ಥಾನಗಳನ್ನ ನೋಡಬೇಕು ಅನ್ನೋ ಸಣ್ಣ ಆಸೆ ಇವರದು. ಪ್ರಶಸ್ತಿ ಬಂದ ಹಣ, ಕೂಡಿಟ್ಟ ಹಣ ಎಲ್ಲವನ್ನೂ ಕೆರೆ ನಿರ್ಮಾಣಕ್ಕೆ ಹಾಕಿದವರು. ಅದೆಲ್ಲವೂ ಇದ್ರೆ ಸ್ವತಃ ಕಾರ್ ಖರೀದಿಸಬಹುದಿತ್ತು. ಆದ್ರೆ, ನಿಸ್ವಾರ್ಥ ಗುಣ ಹಾಗೆ ಮಾಡ್ಲಿಲ್ಲ. ಇಂಥಾ ಕಾಮೇಗೌಡರು ಉಚಿತ ಬಸ್ ಪಾಸ್ ಗೆ ಮನವಿ ಮಾಡಿದ್ದು, ಸರ್ಕಾರ ಏನು ಹೇಳುತ್ತೆ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!