‘ಯಾರೆ ದುಡ್ಡು ಕೊಟ್ರೆ ತಗೊಳ್ಳಿ, ವೋಟ್ ಸಿದ್ದರಾಮಯ್ಯಗೆ ಹಾಕಿ’

173

ಪ್ರಜಾಸ್ತ್ರ ಸುದ್ದಿ

ಹಾಸನ: ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಗಿನೆಲೆ ಕನಕಪೀಠದ ನಿರಂಜನಾನಂದ ಸ್ವಾಮೀಜಿ, ಯಾರೆ ದುಡ್ಡು ಕೊಟ್ರೆ ಬೇಡ ಎನ್ನದೆ ತೆಗೆದುಕೊಳ್ಳಿ. ವೋಟ್ ಮಾತ್ರ ಸಿದ್ದರಾಮಯ್ಯನವರಿಗೆ ಹಾಕಿ ಅನ್ನೋ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಅನ್ನೋದು ವೈರಲ್ ಆಗುತ್ತಿದೆ.

ಕನಕದಾಸರು, ರಾಯಣ್ಣ ರೀತಿ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯನವರು. ಬೇರೆ ಪಕ್ಷದವರು ನಿಮ್ಮನ್ನು ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಏನಾದರೂ ಕೆಳಕ್ಕೆ ಹೋದರೆ ನೀವು ಪಾತಾಳಕ್ಕೆ ಹೋಗುತ್ತೀರಿ ಎಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.




Leave a Reply

Your email address will not be published. Required fields are marked *

error: Content is protected !!