ಈ ತಿಂಗಳು ಪೂರ್ತಿ ಪುಸ್ತಕಗಳಿಗೆ ಶೇ.50ರಷ್ಟು ರಿಯಾಯಿತಿ

286

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವೂ ಈ ತಿಂಗಳು ಪೂರ್ತಿ ಶೇಕಡ 50ರ ದರದಲ್ಲಿ ಪುಸ್ತಕ ಮಾರಾಟ ಮಾಡುತ್ತಿದೆ. ಈ ಕುರಿತು ಕನ್ನಡ ಪುಸ್ತಕ ಪ್ರಾಧಿಕಾರ ತಿಳಿಸಿದೆ.

ನಗರದ ಕನ್ನಡ ಭವನದಲ್ಲಿರುವ ಸಿರಿಗನ್ನಡ ಪುಸ್ತಕ ಮಳಿಗೆ ಸೇರಿದಂತೆ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ತೆರೆದಿರುವ ಸಿರಿಗನ್ನಡ ಮಳಿಗೆಗಳಲ್ಲಿ ಶೇಕಡ 50ರ ರಿಯಾಯಿತಿ ದರದಲ್ಲಿ ಪುಸ್ತಕಗಳು ಸಿಗಲಿವೆ.

ಇನ್ನು ಆನ್ಲೈನ್ ಮೂಲಕ ಸಹ ಪುಸ್ತಕ ಬುಕ್ ಮಾಡಬಹುದು. ನೀವು ನೀಡಿದ ವಿಳಾಸಕ್ಕೆ ಪುಸ್ತಕಗಳು ಬರಲಿವೆ. http://www.kannadapustakaprpdhikara.com/ ಜಾಲತಾಣದ ಮೂಲಕ ಪುಸ್ತಕ ಖರೀದಿಸಬಹುದು.




Leave a Reply

Your email address will not be published. Required fields are marked *

error: Content is protected !!