ಅನಧಿಕೃತವಾಗಿ ಕಂಟ್ರಿ ಪಿಸ್ತೂಲ್: ವಿಜಯಪುರದಲ್ಲಿ ಓರ್ವನ ಬಂಧನ

352

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪುರ: ಅನಧಿಕೃತವಾಗಿ ಕಂಟ್ರಿ ಪಿಸ್ತೂಲ್ ಹೊಂದಿದ್ದ ವ್ಯಕ್ತಿಯೊಬ್ಬನನ್ನ ಬಂಧಿಸಲಾಗಿದೆ.  ಸಿಇಎನ್ ಅಪರಾಧ ಪೋಲಿಸರು. ತಾಲೂಕಿನ ಖತಿಜಾಪುರದ ಅಂಬರೀಶ ಸುಭಾಷ ರಾಠೋಡ ಎಂಬಾತನನ್ನ ಬಂಧಿಸಿದ್ದಾರೆ .

ಈತ ಕಂಟ್ರಿ ಪಿಸ್ತೂಲ್ ನ್ನ ಇಂಡಿ ತಾಲೂಕಿನ ಈಜಾಜ್ ಬಂದೇನವಾಜ ಪಟೇಲ್ ಎಂಬುವನಿಂದ ಖರೀದಿಸಿದ್ದಾನಂತೆ. ಈಗಾಗಲೇ ಕಂಟ್ರಿ ಪಿಸ್ತೂಲ್ ಮಾರಾಟ ಮಾಡಿದ್ದ ಆರೋಪಿಯು ಸದ್ಯ ಕೇಂದ್ರ ಕಾರಾಗೃಹದಲ್ಲಿದ್ದು ಇಬ್ಬರು ಆರೋಪಿತರ ಮೇಲೆ ವಿಜಯಪುರ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಕಲಂ 25(ಎ), 2(ಎ) ಹಾಗೂ (ಬಿ) ಭಾರತೀಯ ಆಯುಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸಿಇಎನ್ ಪೋಲಿಸ್ ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್ ಶ್ಲಾಘಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!