ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಬಿಜೆಪಿ ವತಿಯಿಂದ ಕಾರ್ಗಿಲ್ ವಿಜಯೋತ್ಸವವನ್ನ ಆಚರಿಸಲಾಯ್ತು. ಬಿಜೆಪಿ ಸಿಂದಗಿ ಮಂಡಲ ವತಿಯಿಂದ
ಜುಲೈ 26ರ ಸಂಜೆ ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡಲಾಯ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಸೈನಿಕ ಶ್ರೀಶೈಲ ಯಾಳಮೇಲಿ, ಯುವ ಮೋರ್ಚಾ ಅಧ್ಯಕ್ಷ ಮಲ್ಲು ಬಗಲಿ, ಮಂಡಲ ಅಧ್ಯಕ್ಷ ಈರಣ ರಾವೂರ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಸೇರಿದಂತೆ ಹಿರಿಯರು ಭಾರತೀಯ ಸೈನಿಕರ ತ್ಯಾಗ ಬಲಿದಾನದ ಕುರಿತು ಅಭಿಪ್ರಾಯ ಹಂಚಿಕೊಂಡರು.
ಇದೇ ವೇಳೆ ಎಂ.ಎಸ್ ಮಠ, ಸಿದ್ದು ಬುಳ್ಳಾ, ಪ್ರವೀಣ ಕಾಂಟಿಗೊಂದ, ಮಾಧ್ಯಮ ಪ್ರಮುಖ ಸುದರ್ಶನ ಜಿಂಗಾಣಿ, ಸಿದ್ದರಾಮ ಆನಗೊಂದ, ಮಲ್ಲು ಪೂಜಾರಿ, ಶಿವು ನಾಟಿಕಾರ, ಕಾಜು ಬಂಕಲಗಿ, ರಜಾಕ ಮುಜೆವಾರ, ಶಿವರಾಜ ಗಿರಿಗೌಡ್ರ, ಸಿದ್ದು ಕುರನಳ್ಳಿ, ಎಸ್.ಆರ್ ಪಾಟೀಲ, ಪ್ರಕಾಶ ನಂದಿಕೋಲ, ರಾಜು ಗೌಂಡಿ, ವಿನಾಯಕ ದೇವರಮನಿ, ರವಿ ಕಣ್ಣಿ ಸೇರಿದಂತೆ ಅನೇಕರು ಭಾಗವಹಿಸಿದ್ರು.