ಪ್ರಜಾಸ್ತ್ರ ಸುದ್ದಿ
ಮಂಡ್ಯ: ರಾಜ್ಯ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಉಳಿದಿದೆ. ಆದರೆ, ಜನಪ್ರತಿನಿಧಿಗಳು ಈಗಲೇ ಕ್ಷೇತ್ರಗಳ ಲೆಕ್ಕಾಚಾರ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ.
ನಾಲ್ಕೈದು ಕ್ಷೇತ್ರಗಳಲ್ಲಿ ನಿಲ್ಲಲು ಹೇಳುತ್ತಿದ್ದಾರೆ. ಇವರೆಗೂ ನಾನು ಎಲ್ಲಿಂದ ಸ್ಪರ್ಧೆ ಮಾಡಬೇಕು ಅನ್ನೋದರ ಬಗ್ಗೆ ಯೋಚನೆ ಮಾಡಿಲ್ಲ ಎಂದರು. ಇನ್ನು ಸಿ.ಎಂ ಇಬ್ರಾಹಿಂ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಹಾಲಿ ಶಾಸಕ ಸಂಗಮೇಶ್ ಬಿಟ್ಟು ಇಬ್ರಾಹಿಂಗೆ ಭದ್ರಾವತಿಯಲ್ಲಿ ಟಿಕೆಟ್ ಕೊಟ್ಟೇವು. ಸೋತರು. ಆಮೇಲೆ ಎಂಎಲ್ಸಿ ಮಾಡಿದ್ವಿ. ಮತ್ತೆ ರಿನಿವಲ್ ಸಹ ಮಾಡಿದ್ವಿ. ನಾನು ಪಕ್ಷ ಬಿಡಬೇಡ ಎಂದು ಹೇಳಿನಿ ಎಂದರು.