ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಬರೋಬ್ಬರಿ 100 ಮಿಲಿ ಮೀಟರ್ ಮಳೆಯಾಗಿದೆ. ಇದರ ಜೊತೆಗೆ ಮಳೆ ಈಗ್ಲೂ ಮುಂದುವರೆದಿದೆ. ಇದರ ಪರಿಣಾಮ ಐಟಿ ಸಿಟಿಯ ಬಹುತೇಕ ನಗರಗಳು ಮಳೆ ನೀರಿನಿಂದ ತುಂಬಿಕೊಂಡಿವೆ.
ಗುರುವಾರ ಮುಂಜಾನೆಯಿಂದ ಮುಖ್ಯಮಂತ್ರಿ ಬೊಮ್ಮಾಯಿ, ಸಚಿವರು, ಅಧಿಕಾರಿಗಳು ಸಿಟಿ ರೌಂಡ್ಸ್ ನಡೆಸಿದ್ದಾರೆ. ಕಮಲಾನಗರ, ನಾಗವಾರ ಮೆಟ್ರೋ ನಿಲ್ದಾಣಕ್ಕೆ ಮೊದಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದಾದ ಬಳಿಕ ಹೆಚ್ ಬಿಆರ್ ಲೇಔಟ್, ಹೆಬ್ಬಾಳದ ಎಸ್ ಟಿಪಿ ಪ್ರದೇಶಗಳಿಗೆ ಭೀಟಿ ನೀಡಲಿದ್ದಾರೆ. ಮಳೆಯಿಂದ ಸಮಸ್ಯೆ ಎದುರಿಸುತ್ತಿರುವ ಜನತೆ ಸಿಎಂ ಆದಿಯಾಗಿ ಎಲ್ಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.