ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ 3ನೇ ಪಟ್ಟಿಯನ್ನು ಇಂದು ಸಂಜೆ ಬಿಡುಗಡೆ ಮಾಡಿದೆ. ಉಳಿದಿರುವ 12 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನು ಎರಡು ಕ್ಷೇತ್ರಗಳು ಮತ್ತೆ ಬಾಕಿ ಉಳಿದಿವೆ.
ವಿಜಯಪುರ ಜಿಲ್ಲೆಯ ನಾಗಠಾಣ ಎಸ್ಸಿ ಮೀಸಲು ಕ್ಷೇತ್ರಕ್ಕೆ ಸಂಜೀವ ಐಹೊಳೆ, ಸೇಡಂ ರಾಜಕುಮಾರ ಪಾಟೀಲ, ಕೊಪ್ಪಳ-ಮಂಜುಳಾ ಅಮರೇಶ, ರೋಣ-ಕಳಕಪ್ಪ ಬಂಡಿ, ಹುಬ್ಬಳ್ಳಿ-ಧಾರವಾಡ ಕೇಂದ್ರ- ಮಹೇಶ ಟೆಂಗಿನಕಾಯಿ, ಹಗರಿಬೊಮ್ಮನಹಳ್ಳಿ(ಎಸ್ಸಿ)-ಬಿ.ರಾಮಣ್ಣ, ಹೆಬ್ಬಳ-ಕಟ್ಟಾ ಜಗದೀಶ, ಗೋವಿಂದರಾಜ ನಗರ-ಉಮೇಶ ಶೆಟ್ಟಿ, ಮಹಾದೇವಪುರ(ಎಸ್ಸಿ)-ಮಂಜುಳಾ ಅರವಿಂದ ಲಿಂಬಾವಳಿ ಹಾಗೂ ಕೃಷ್ಣರಾಜನಗರ-ಶ್ರೀವಾಸ್ತ ಅವರಿಗೆ ಟಿಕೆಟ್ ನೀಡಲಾಗಿದೆ.