ದೆಹಲಿ: ಬಿಜೆಪಿ ನಾಯಕರಿಗೆ ಅದೇನಾಗಿದೆಯೋ ಗೊತ್ತಿಲ್ಲ. ಒಬ್ಬರಾದ್ಮೇಲೆ ಒಬ್ಬರು ನಾಲಿಗೆಯನ್ನ ಹರಿ ಬಿಡುತ್ತಿದ್ದಾರೆ. ನಾಥೂರಾಮ್ ಗೋಡ್ಸೆಯನ್ನು ದೇಶ ಭಕ್ತ ಅನ್ನೋ ಪ್ರಗ್ನಾ ಸಿಂಗ್ ಠಾಕೂರ್ ಒಂದ್ಕಡೆ, ಗೋಡ್ಸೆಗಿಂತ ಯಾರು ಹೆಚ್ಚು ಕ್ರೂರಿ ಅಂತಾ ಹೇಳುವ ಕಟೀಲ್ ಇನ್ನೊಂದು ಕಡೆ. ಇವರ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವ ಹೆಗಡೆ ಮತ್ತೊಂದು ಕಡೆ. ಈ ಎಲ್ಲ ನಾಯಕರ ಹೇಳಿಕೆಗಳಿಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಾದ ಬಿಜೆಪಿ ಹೈಕಮಾಂಡ್, 10 ದಿನಗಳ ಕಾಲಾವಕಾಶ ನೀಡಿದೆ. ಇಷ್ಟು ದಿನಗಳ ಒಳಗೆ ತಮ್ಮ ಹೇಳಿಕೆಗೆ ಉತ್ತರ ನೀಡುವಂತೆ ಹೇಳಿದೆ. ಇನ್ನು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ, ಗೋಡ್ಸೆ ದೇಶಭಕ್ತ ಹೇಳಿಕೆ ಅವರ ವೈಯಕ್ತಿವಾಗಿದೆ. ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಗಾಂಧಿಯನ್ನು ಅವಮಾನಿಸಿದವರನ್ನ ಕ್ಷಮಿಸುವ ಪ್ರಶ್ನೆಯೇ ಇಲ್ಲ ಅಂತಾ ಪ್ರಧಾನಿ ಮೋದಿ ಹೇಳಿದ್ದಾರೆ.
ಇದೆಲ್ಲದರ ನಡುವೆ ಸಾದ್ವಿ ಪ್ರಜ್ನಾ ಠಾಕೂರ್ ಸಿಂಗ್, ನಳೀನ್ ಕುಮಾರ್ ಕಟೀಲ್, ಅನಂತಕುಮಾರ್ ಹೆಗಡೆ ಕ್ಷಮೆ ಕೇಳಿದ್ದು, ನಮ್ಮ ಟೀಟ್ವರ್ ಹ್ಯಾಕ್ ಆಗಿದೆ ಅನ್ನೋ ಮಾತುಗಳನ್ನು ಹೇಳುತ್ತಿದ್ದಾರೆ. ಇದು ನಿಜಕ್ಕೂ ಆಘಾತಕಾರಿಯಾಗಿದ್ದು, ಇನ್ಮುಂದೆಯಾದರೂ ಬಿಜೆಪಿ ಇಂತಾ ನಾಯಕರ ನಾಲಿಗೆಗೆ ಬೀಗ ಹಾಕಬೇಕಿದೆ.