ಚೆನ್ನೈ: ಎಲ್ಲ ಧರ್ಮಗಳಲ್ಲಿ ಭಯೋತ್ಪಾದಕರು ಇದ್ದಾರೆ ಅನ್ನೋ ಮೂಲಕ, ವಿವಾದಿಂದ ತಣ್ಣಗೆ ಹಿಂದೆ ಸೇರಿಯಲು ನೋಡುತ್ತಿದ್ದಾರೆ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್. ನಾಥೂರಾಮ್ ಗೋಡ್ಸ್ ಸ್ವತಂತ್ರ ಭಾರತದ ಮೊದಲ ಹಿಂದೂ ಉಗ್ರ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು. ಇದೀಗ ಚೆನ್ನೈನಲ್ಲಿ ಮಾತ್ನಾಡಿದ ಅವರು, ಎಲ್ಲ ಧರ್ಮದಲ್ಲಿಯೂ ಉಗ್ರರಿದ್ದಾರೆ. ಯಾರೂ ಮುಗ್ಧರಲ್ಲ ಅಂತಾ ಮಾತು ಬದಲಿಸಿದ್ದಾರೆ. ಅಲ್ದೇ ಎಲ್ಲ ಧರ್ಮಗಳಲ್ಲಿ ಉಗ್ರ ಇದ್ದಾರೆ ಅನ್ನೋದನ್ನ ಇತಿಹಾಸ ಸಹ ಹೇಳುತ್ತೆ ಎಂದಿದ್ದಾರೆ.
ತಮಿಳುನಾಡಿನ ಅರವಕುರಿಚಿಯ ಪ್ರಚಾರ ಸಭೆಯಲ್ಲಿ ಕಳೆದ ಮೇ 13ರಂದು ಪಾಲ್ಗೊಂಡಿದ್ದ ಕಮಲ್ ಹಾಸನ್, ಸ್ವತಂತ್ರ ಭಾರತದ ಮೊದಲ ಹಿಂದೂ ಉಗ್ರ ನಾಥೂರಾಮ್ ಗೋಡ್ಸೆ ಅಂತಾ ಹೇಳಿದ್ದರು. ಅಲ್ದೆ, ಇಲ್ಲಿ ಮುಸ್ಲಿಂರು ಹೆಚ್ಚಿಗೆ ಇರುವ ಕಾರಣಕ್ಕೆ ಹೇಳುತ್ತಿಲ್ಲ. ಸತ್ಯವನ್ನು ಮಾತ್ರ ಹೇಳುತ್ತಿದ್ದೇನೆ ಅಂತಾ ಮಕ್ಕಳ್ ನಿಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಹೇಳಿದ್ದರು.