ಪ್ರಜಾಸ್ತ್ರ ಸುದ್ದಿ
ನವದೆಹಲಿ: ಉಕ್ರೇನ್ ಜೊತೆಗೆ ರಷ್ಯ ಇಟ್ಟುಕೊಂಡಿರುವ ತತ್ವವನ್ನೇ ಚೀನಾ ಭಾರತದೊಂದಿಗೆ ಅಳವಡಿಸಕೊಳ್ಳಲು ಹೊರಟಿದೆ. ಹೀಗಾಗಿ ಭಾರತದ ಗಡಿ ಬದಲಾಯಿಸುವ ಬೆದರಿಕೆ ಹಾಕುತ್ತಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದರು.
ನಟ, ರಾಜಕಾರಣಿ ಕಮಲ್ ಹಾಸನ್ ಅವರೊಂದಿಗೆ ನಡೆಸಿದ ಸಂವಾದಲ್ಲಿ ಮಾತನಾಡಿದರು. ಭಾರತ ಚೀನಾ ಗಡಿ ಸಂಘರ್ಷ ಯಾವುದೇ ದೂರದೃಷ್ಟಿಯಿಲ್ಲದ ಗೊಂದಲಮಯ, ದುರ್ಬಲ ಆರ್ಥಿಕತೆ, ಕೋಪ, ದ್ವೇಷ ಹೊಂದಿದೆ. ಉಕ್ರೇನ್ ಪಶ್ಚಿಮದೊಂದಿಗೆ ಬಲವಾದ ಸಂಬಂಧ ಇಟ್ಟುಕೊಂಡರೆ ನಾವು ಬದಲಾಯಿಸುತ್ತೇವೆ ಎಂದು ರಷ್ಯ ಬೆದರಿಕೆ ಹಾಕುವಂತೆ. ಚೀನಾ ನೀವು ಏನು ಮಾಡುತ್ತೀರಿ ಎಂಬುವುದರ ಬಗ್ಗೆ ಜಾಗರುಕರಾಗಿರಿ ಎನ್ನುತ್ತಿದೆ.
ಲಾಡಖ್ ಪ್ರವೇಶಿಸುತ್ತೇವೆ. ಅರುಣಾಚಲ ಪ್ರವೇಶಿಸುತ್ತೇವೆ ಎನ್ನುವಂತೆ ನಿಧಾನಕ್ಕೆ ವೇದಿಕೆ ನಿರ್ಮಿಸುತ್ತಿದೆ. ಹಿಂದೆ ಗಡಿಯಲ್ಲಿ ಹೋರಾಡಿದರೆ ಈಗ ಎಲ್ಲೆಡೆ ಹೋರಾಡಬೇಕಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.