ಪ್ರಜಾಸ್ತ್ರ ಸುದ್ದಿ
ಮಂಡ್ಯ: ಮನೆಯಲ್ಲಿ ತಾಯಿ ನೇಣಿಗೆ ಶರಣಾದರೆ, ಮಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಭಾಷ್ ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿ ನಡೆದಿದೆ. ನಿವೃತ್ತ ಶಿಕ್ಷಕಿ ವೀಣಾ ಜೋದಿನಿ ಹಾಗೂ ಮಗ ನಿತಿನ್ ಮೃತ ದುರ್ದೈವಿಗಳು. ಈ ಪ್ರಕರಣ ಸಾಕಷ್ಟು ಅನುಮಾನಗಳಿಂದ ಕೂಡಿದೆ.
ನಿವೃತ್ತ ಶಿಕ್ಷಕಿ ವೀಣಾ ಮಗನೊಂದಿಗೆ ಜೀವನ ನಡೆಸುತ್ತಿದ್ದರು. ಎರಡು ವರ್ಷಗಳ ಹಿಂದೆ ಆರ್.ಪಿ ನಗರದಲ್ಲಿರುವ ಆಸ್ತಿ ಮಾರಿದ್ದರು. ಆ ಹಣವನ್ನು ಮಗ ಬೇಕಾಬಿಟ್ಟಿಯಾಗಿ ಖರ್ಚು ಮಾಡಿದ್ದ. ಅಲ್ಲದೆ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಹಣಕ್ಕಾಗಿ ತಾಯಿಯನ್ನು ಪೀಡುಸುತ್ತಿದ್ದನಂತೆ.
ಹೊಸ ವರ್ಷದ ಸಂಭ್ರಮದ ಹೊತ್ತಿನಲ್ಲಿ ದುರಂತ ನಡೆದಿದೆ. ವೀಣಾ ಎತ್ತರವಾಗಿದ್ದು ಮನೆಯ ಕಿಟಕಿಗೆ ಹೇಗೆ ನೇಣು ಹಾಕಿಕೊಂಡರು ಅನ್ನೋ ಅನುಮಾನ ಬಂದಿದೆ. ಪಶ್ಚಿಮ ಠಾಣೆ ಪೊಲೀಸರು ಮಗ ನಿತಿನ್ ವಿಚಾರಣೆ ನಡೆಸಿದ್ದರು. ಆಕೆ ಮೃತದೇಹ ಮಿಮ್ಸ್ ಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ಮಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಯಿ ಹತ್ಯೆ ಮಾಡಿ ಅದರ ಭಯಕ್ಕೊ, ಪ್ರಾಯಶ್ಚಿತ್ತಕ್ಕೊ ಅಥವ ತಾಯಿ ಸಾವಿನ ನೋವಿನಲ್ಲಿ ಸಾವಿಗೆ ಶರಣಾಗಿದ್ದಾನೋ ಗೊತ್ತಿಲ್ಲ. ಒಟ್ಟಿನಲ್ಲಿ ಪೊಲೀಸರು ಈ ಎರಡು ಸಾವಿನ ರಹಸ್ಯವನ್ನು ಬಯಲು ಮಾಡಬೇಕಿದೆ.