ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರ ಈಗಾಗ್ಲೇ ಜುಲೈ 5ರಿಂದ ಪ್ರತಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಗೆ ಆದೇಶಿಸಿದೆ. ಮುಂದಿನ ಆದೇಶದವರೆಗೂ ಪ್ರತಿ ಭಾನುವಾರ ಕರ್ನಾಟಕ ಬಂದ್ ಮಾಡಲು ನಿರ್ಧರಿಸಿದ್ದು, ಇಂದು ರಾತ್ರಿ 8ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯ ತನಕ ಲಾಕ್ ಡೌನ್ ಜಾರಿಯಲ್ಲಿರಲಿದೆ.
ಈಗಾಗ್ಲೇ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5ಗಂಟೆಯ ತನಕ ಕರ್ಫ್ಯೂ ಇದೆ. ಇದರ ಜೊತೆಗೆ ಲಾಕ್ ಡೌನ್ ಜಾರಿಯಲ್ಲಿರುತ್ತೆ. ಹೀಗಾಗಿ ಸುಖಾಸುಮ್ಮನೆ ಮನೆಯಿಂದ ಆಚೆ ಬಂದ್ರೆ, ಕೇಸ್ ದಾಖಲಿಸಲಾಗುತ್ತೆ. ಇನ್ನು ತುರ್ತು ಸೇವೆಗಳಾದ ಆಸ್ಪತ್ರೆ, ಔಷಧಿ ಅಂಗಡಿ, ತರಕಾರಿ, ಕಿರಾಣಿ, ಹೋಟೆಲ್(ಪಾರ್ಸಲ್) ಸೇರಿ ಕೆಲವುಗಳಿಗೆ ಮಾತ್ರ ವಿನಾಯ್ತಿ.
ಇನ್ನು ಸರಕು ಸೇವಾ ವಾಹನಗಳು ಬಿಟ್ಟರೆ ಯಾವುದೇ ರೀತಿಯ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ವಾಣಿಜ್ಯ ಮಳಿಗೆಗಳು ಓಪನ್ ಮಾಡುವಂತಿಲ್ಲ. ಇದು ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗಿನ ಜಾವದ ತನಕ ಜಾರಿಯಲ್ಲಿರಲಿದೆ.