ಮಂಡ್ಯ: ಸಿಎಂ ಬಿ.ಎಸ್ ಯಡಿಯೂರಪ್ಪನವರು ಕಾವೇರಿಗೆ ಇಂದು ಬಾಗಿನ ಅರ್ಪಿಸಿದ್ರು. ತುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಬಾಗಿನ ಅರ್ಪಿಸುವ ಮೂಲಕ ಹಿಂದಿನಿಂದಲೂ ಮಾಡಿಕೊಂಡು ಬರ್ತಿರುವ ಸಂಪ್ರದಾಯವನ್ನ ಸಿಎಂ ನೆರವೇರಿಸಿದ್ರು.
ಈ ವೇಳೆ ಮಾಧ್ಯಮಗಳ ಜೊತೆ ಮಾತ್ನಾಡಿದ ಸಿಎಂ, ಒಂದು ತಿಂಗಳ ಹಿಂದೆ ಯಾವುದೇ ಜಲಾಶಯ ತುಂಬದೆ ಇರೋದ್ರಿಂದ ನನ್ಗೆ ಆತಂಕವಿತ್ತು. ಇದೀಗ ವರುಣ ದೇವನ ಕೃಪೆಯಿಂದ ಎಲ್ಲ ಜಲಾಶಯಗಳು ಭರ್ತಿಯಾಗಿವೆ ಅಂತಾ ಹೇಳಿದ್ರು. ತಮಿಳುನಾಡಿಗೆ ಬಿಡಬೇಕಾಗಿರುವ ನೀರು ಬಿಟ್ಟಾಗಿದೆ. ಇನ್ನು ಮಂಡ್ಯ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆಗಬೇಕೆಂದು ಹೇಳಿದ್ರು.
ಈ ವೇಳೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ, ಮೈಸೂರು ಸಂಸದ ಪ್ರತಾಪ ಸಿಂಹ, ಮಾಜಿ ಸಚಿವರಾದ ಸಿ.ಎಸ್ ಪುಟ್ಟರಾಜು, ಡಿಸಿ ತಮ್ಮಣ್ಣ, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಅನ್ನದಾನಿ, ಎನ್.ಶ್ರೀನಿವಾಸ, ಪರಿಷತ್ ಸದಸ್ಯ ಕೇಟಿ ಶ್ರೀಕಂಠೇಗೌಡ, ನಾಗಮಂಗಲ ಸದಸ್ಯ ಸುರೇಶಗೌಡ, ಡಿಸಿ ವಂಕಟೇಶ, ಜಿಲ್ಲಾ ವರಿಷ್ಠಾಧಿಕಾರಿ ಪರಶುರಾಮ ಸೇರಿದಂತೆ ಸ್ಥಳೀಯ ಮುಖಂಡರು, ಅಧಿಕಾರಿಗಳು ಭಾಗವಹಿಸಿದ್ರು.