ದುಬಾರಿ ಕಾರನ್ನು ಕಾವೇರಿ ನದಿಯಲ್ಲಿ ಮುಳುಗಿಸಿದ್ದ…

290

ಪ್ರಜಾಸ್ತ್ರ ಸುದ್ದಿ

ಶ್ರೀರಂಗಪಟ್ಟಣ: ದುಬಾರಿ ಬಿಎಂಡಬ್ಲು ಕಾರನ್ನು ಕಾವೇರಿ ನದಿಯಲ್ಲಿ ಮುಳುಗಿಸಿ ಹೋಗಲಾಗಿತ್ತು. ಇದನ್ನು ನೋಡಿದ ಜನರಿಗೆ ಸಾಕಷ್ಟು ಕುತೂಹಲ. ಇದೇನು ಅಪಘಾತ ಸಂಭವಿಸಿದ್ಯಾ ಏನು ಅನ್ನೋದು.

ಗಂಜಾಂನ ನಿಮಿಷಾಂಬ ಕರಿಘಟ್ಟ ಸೇತುವೆ ಕೆಳಭಾಗದ ಕಾವೇರಿಯಲ್ಲಿ ನದಿಯಲ್ಲಿ ಅರ್ಧಮುಳಗಿದ ಕಾರು ನೋಡಿ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಶ್ರೀರಂಗಪಟ್ಟಣ ಠಾಣೆ ಪೊಲೀಸರು, ಕಾರನ್ನು ಹೊರ ತಗೆಸಿದ್ದಾರೆ. ಆಗ ಐಷಾರಾಮಿ ದುಬಾರಿ ಕಾರು ಎಂದು ತಿಳಿದಿದೆ. ಠಾಣೆಗೆ ತೆಗೆದುಕೊಂಡು ಹೋಗಿ ಚೆಕ್ ಮಾಡಿದಾಗ ಅದರಲ್ಲೊಂದು ದಾಖಲೆ ಸಿಕ್ಕಿದೆ.

ಈ ಕಾರು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ರೂಪೇಶ್ ಎಂಬುವರಿಗೆ ಸೇರಿದೆ. ಅವರಿಗೆ ಫೋನ್ ಮಾಡಿದಾಗ ಹೌದು, ನಾನೇ ಅದನ್ನು ನೀರಿನಲ್ಲಿ ಮುಳುಗಿಸಿದ್ದೇನೆ ಎಂದಿದ್ದಾರೆ. ಆತನನ್ನು ಕರೆಸಿ ವಿಚಾರಣೆ ನಡೆಸಿದಾಗ ಒಂದೊಂದು ಹೇಳಿಕೆ ನೀಡಿದ್ದಾನೆ. ನಂತರ ಆತನ ಸಂಬಂಧಿಕರನ್ನು ಕರೆಸಿ ವಿಚಾರಿಸಿದ್ದಾರೆ. ಕೆಲ ದಿನಗಳ ಹಿಂದೆ ತಾಯಿ ನಿಧನರಾಗಿದ್ದಾರೆ. ಇದರಿಂದಾಗಿ ಖಿನ್ನತೆಗೆ ಒಳಗಾಗಿದ್ದಾನೆ. ಇದರಿಂದಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾನೆ ಎಂದಾಗ, ಕೇಸ್ ಖುಲಾಸೆಗೊಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!