ಪ್ರಜಾಸ್ತ್ರ ಸಿನಿಮಾ ಸುದ್ದಿ
ಬೆಂಗಳೂರು: ಕನ್ನಡ ಚಲನಚಿತ್ರ ಕಪ್ ಟೂರ್ನಿಯ 3ನೇ ಆವೃತ್ತಿಗೆ ಸ್ಯಾಂಡಲ್ ವುಡ್ ಸಜ್ಜಾಗಿದೆ. ಫೆಬ್ರವರಿ 11 ಹಾಗೂ 12 ರಂದು ಎರಡು ದಿನಗಳ ಕಾಲ ಪಂದ್ಯಗಳು ನಡೆಯಿವೆ. 6 ನಾಯಕ ನಟರ ನಾಯಕತ್ವದಲ್ಲಿ 6 ತಂಡಗಳು ರೆಡಿಯಾಗಿವೆ.
ಕೋವಿಡ್ ಕಾರಣಕ್ಕೆ ಎರಡು ವರ್ಷಗಳಿಂದ ಟೂರ್ನಿ ನಡೆದಿರಲಿಲ್ಲ. ಇದೀಗ ಟೂರ್ನಿ ಶುರುವಾಗುತ್ತಿದೆ. ಮೈಸೂರಿನಲ್ಲಿ ಟೂರ್ನಿ ಆಯೋಜಿಸಲಾಗಿದೆ. ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪೆಟ್ರಿಯೊಟ್ಸ, ಗಂಗಾ ವಾರಿಯರ್ಸ್, ಹೊಯ್ಸಳ ಈಗಲ್ಸ್ , ಒಡೆಯರ್ ಚಾರ್ಜರ್ಸ್, ಕದಂಬ ಲಯನ್ಸ್ ಸೇರಿ 6 ತಂಡಗಳು ಕಣಕ್ಕೆ ಇಳಿಯಲಿವೆ.
ಹ್ಯಾಟ್ರಿಕ್ ಹೀರೋ ಶಿವಣ್ಣ, ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಜೆ.ಕೆ(ಕಾರ್ತಿಕ್ ಜಯರಾಮ್), ಡಾರ್ಲಿಂಗ್ ಕೃಷ್ಣ, ಪ್ರದೀಪ್ ತಂಡದ ನಾಯಕರಾಗಿದ್ದಾರೆ. ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಕಾರ್ತಿಕ್ ಗೌಡ, ಕೆ.ಪಿ ಶ್ರೀಕಾಂತ್, ನಿರ್ದೇಶಕರಾದ ನಂದ ಕಿಶೋರ್, ದಿನಕರ್ ತೂಗದೀಪ್ ಸೇರಿ ಇತರರು ಟೂರ್ನಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.