ಬೆಂಗಳೂರು: ಕರೋನಾ ಲಾಕ್ ಡೌನ್ ಶುರುವಾಗಿ ಕಳೆದ ಒಂದೂವರೆ ತಿಂಗಳು ಮೇಲಾಗಿದೆ. ಇದೀಗ ಒಂದಿಷ್ಟು ಸಡಿಲಿಕೆ ಮಾಡಿರುವುದ್ರಿಂದ ಸ್ವಲ್ಪ ವ್ಯಾಪಾರ ವಹಿವಟು, ಓಡಾಟ ನಡೆದಿದೆ. ಹೀಗಾಗಿ ರಾಜ್ಯ ಸರ್ಕಾರ ವಿದ್ಯುತ್ ಬಿಲ್ ಕಟ್ಟುಲು ಟೈಂ ವಿನಾಯ್ತಿ ನೀಡಿತ್ತು. ಪೂರ್ತಿ ಬಿಲ್ ಕಟ್ಟುವವರಿಗೆ ಶೇಕಡ 1ರಷ್ಟು ವಿನಾಯ್ತಿ ಎಂದಿದೆ. ಆದ್ರೆ, ಇದೀಗ ಕೆಇಬಿಯಿಂದ ವಸೂಲಿ ನಡೆದಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ.
ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಬಿಲ್ ಪ್ರತ್ಯೇಕ ಮಾಡಿ ಕೊಡದೆ, ಎರಡು ತಿಂಗಳ ಬಿಲ್ ನ್ನ ಒಟ್ಟಿಗೆ ಮಾಡಿ ಕೊಡ್ತಿದ್ದಾರೆ. ಕೆಲವು ಕಡೆ ಸರಾಸರಿ ಆಧಾರದ ಮೇಲೆ ಬಿಲ್ ನೀಡುವ ಮೂಲಕ ಜನರಿಂದ ಹಣ ಸೂಲಿಗೆ ಮಾಡಲಾಗ್ತಿದೆ ಎಂದು ಆಕ್ರೋಶ ಹೊರ ಹಾಕ್ತಿದ್ದಾರೆ. ಒಂದು ಯೂನಿಟ್ ಗೆ 3 ರೂಪಾಯಿ ಅಂದ್ರೆ ಕೆಇಬಿ ಸ್ಲ್ಯಾಬ್ ಪ್ರಕಾರ ಸಾರ್ವಜನಿಕರು 6 ರೂಪಾಯಿ ಕಟ್ಟಬೇಕು. ಪ್ರತಿ ತಿಂಗಳು ಅಂದಾಜು 500 ರಿಂದ 600 ರೂಪಾಯಿ ಬರ್ತಿದ್ರೆ ಈಗ 800-900 ರೂಪಾಯಿ ಬರುತ್ತೆ. ಎರಡು ತಿಂಗಳು ಅಂದ್ರೆ 16,00-18,00 ರೂಪಾಯಿ ಕಟ್ಟಬೇಕಾಗ್ತಿದೆ. ಹೀಗಾಗಿ ಜನರಲ್ಲಿ ಸಾಕಷ್ಟು ಗೊಂದಲ ಮೂಡಿದ್ದು, ಮೊದ್ಲೇ ಕೆಲಸವಿಲ್ಲದೆ, ವ್ಯಾಪಾರವಿಲ್ಲದೆ ಒದ್ದಾಡ್ತಿರುವವರು ಇಷ್ಟೊಂದು ಬಿಲ್ ಎಲ್ಲಿಂದ ಕಟ್ಟುವುದು ಅಂತಿದ್ದಾರೆ.
ಕೆಇಬಿ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿ ಬಂದಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ರಾಜ್ಯದ ಜನರ ಪರವಾಗಿ ಇರಬೇಕು. ಸಮಯದ ವಿನಾಯ್ತಿ ನೀಡಿರುವ ಸರ್ಕಾರ, ಇದೀಗ ಸರಾಸರಿ ಆಧಾರದ ಮೇಲೆ ಬಿಲ್ ಕಟ್ಟಿಸಿಕೊಳ್ತಿರುವುದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಮೂಡಿದ್ದು, ಸರ್ಕಾರಕ್ಕೆ ಇದು ಮತ್ತೊಂದು ಕಂಟಕವಾಗುವುದರಲ್ಲಿ ಡೌಟೇ ಇಲ್ಲ.