ಮಣಿಪುರದಲ್ಲಿ ನನ್ನ ತಾಯಿಯನ್ನು ಕೊಂದು ಹಾಕಿರಿ: ರಾಹುಲ್ ಗಾಂಧಿ

296

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಸಂಸತ್ತಿಗೆ ಮರಳಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಅವಿಶ್ವಾಸ ಗೊತ್ತುವಳಿ ಮೇಲೆ ಮಾತನಾಡಿದರು. ಮಣಿಪುರದಲ್ಲಿ ನಡೆದ ಘಟನೆ ಬಗ್ಗೆ ಸರ್ಕಾರಗಳ ವಿರುದ್ಧ ಕಿಡಿ ಕಾರಿದರು. ಭಾರತ ಮಾತೆಯನ್ನು ಮಣಿಪುರದಲ್ಲಿ ಹತ್ಯೆ ಮಾಡಿದೀರಿ. ದೇಶದ ಮಾನವನ್ನು ಆಡಳಿತ ಪಕ್ಷ ಹರಾಜು ಹಾಕಿದೆ. ನೀವು ದೇಶದ್ರೋಹಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮಾಯಣದಲ್ಲಿ ರಾವಣ ಇಬ್ಬರ ಮಾತು ಮಾತ್ರ ಕೇಳುತ್ತಿದ್ದ. ಕುಂಭಕರ್ಣ ಹಾಗೂ ಮೇಘನಾಥನ ಮಾತು ಮಾತ್ರ ಕೇಳುತ್ತಿದ್ದ. ಹಾಗೇ ಪ್ರಧಾನಿ ಮೋದಿ ಅವರು, ಅಮಿತ್ ಶಾ, ಅದಾನಿ ಇಬ್ಬರು ಮಾತು ಮಾತ್ರ ಕೇಳುತ್ತಾರೆ ಎಂದು ಕಿಡಿ ಕಾರಿದರು. ನೀವು ಭಾರತಮಾತೆಯ ರಕ್ಷಕರಲ್ಲ. ಕೊಲೆಗಡುಕರು. ನಾನು ಪ್ರೀತಿಯಿಂದ ಮಾತನಾಡಿದರೆ, ನೀವು ಪ್ರಚೋದನೆ ನೀಡುತ್ತೀರಿ. ನನ್ನ ತಾಯಿಯನ್ನು ಮಣಿಪುರದಲ್ಲಿ ಕೊಂದು ಹಾಕಿದ್ದೀರಿ ಅಂತಾ ತೀವ್ರ ವಾಗ್ದಾಳಿ ನಡೆಸಿದರು.




Leave a Reply

Your email address will not be published. Required fields are marked *

error: Content is protected !!