ಪ್ರಜಾಸ್ತ್ರ ಸುದ್ದಿ
ಕೊಲ್ಹಾರ: ಕರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜಾತ್ರೆ, ಸಭೆ, ಸಮಾರಂಭಗಳನ್ನ, ಸಾಮೂಹಿಕವಾಗಿ ಜನರನ್ನ ಸೇರಿಸುವ ಕಾರ್ಯಕ್ರಮಗಳನ್ನ ನಿರ್ಬಂಧಿಸಲಾಗಿದೆ. ಇದರ ನಡುವೆಯೂ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದಲ್ಲಿ ಜಾತ್ರೆ ಮಾಡಲಾಗಿದೆ.
ಕೂಡಗಿ ಗ್ರಾಮದಲ್ಲಿ ನಡೆದ ದುರ್ಗಾದೇವಿ ಹಾಗೂ ಸೇವಾಲಾಲ್ ಜಾತ್ರೆಯಲ್ಲಿ ಭರ್ಜರಿ ಬಾಡೂಟ ಹಾಕಿಸಲಾಗಿದೆ. ಅಲ್ದೇ, ಜಾತ್ರೆಯಲ್ಲಿ ಭಾಗವಹಿಸಿದ ಜನರು ಕುಣಿದು ಕುಪ್ಪಳಿಸಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಮೆರೆತು ನೂರಾರು ಜನರು ಸೇರಿರುವುದು ಕಂಡು ಬಂದಿದೆ. ಈ ಮೂಲಕ ಕೂಡಗಿ ಗ್ರಾಮಸ್ಥರು ಕರೋನಾ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ.