ಪ್ರಜಾಸ್ತ್ರ ಸುದ್ದಿ
ವಿಜಯಪುರ: ಎಲ್ಲ ಹುಡುಗರಂತೆ ಈ ಹುಡುಗನು ಖುಷಿ ಖುಷಿಯಾಗಿ ಬಣ್ಣ ಆಡಲು ಹೋಗಿದ್ದಾನೆ. ಹೀಗೆ ಹೋದವನು ಪ್ರಾಣ ಕಳೆದುಕೊಂಡಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಜಿಲ್ಲೆಯ ಕೊಲ್ಹಾರ ತಾಲೂಕಿನ ತಾಳೇವಾಡ ಗ್ರಾಮದಲ್ಲಿ. 12 ವರ್ಷದ ಹಣಮಂತ ಬೀರಪ್ಪ ವಾಲೀಕಾರ ಮೃತ ದುರ್ದೈವಿ ಬಾಲಕ.
ಬಣ್ಣದಾಟದ ಸಲುವಾಗಿ ಗ್ರಾಮ ಪಂಚಾಯ್ತಿ ವತಿಯಿಂದ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ಅದಕ್ಕೆ ನೀರು ತುಂಬಿಸುವ ಸಂದರ್ಭದಲ್ಲಿ ವಿದ್ಯುತ್ ತಂತಿ ತುಂಡಾಗಿ ನೀರಿಗೆ ಬಿದ್ದಿದೆ. ಇದರಿಂದಾಗಿ ಶಾಕ್ ಹೊಡೆದು ಬಾಲಕ ಮೃತಪಟ್ಟಿದ್ದಾನೆ. ಮಗನ ಸಾವಿಗೆ ಗ್ರಾಮ ಪಂಚಾಯ್ತಿಯ ನಿರ್ಲಕ್ಷ್ಯ ಕಾರಣವೆಂದು ಹೆತ್ತವರು ಪ್ರತಿಭಟನೆ ನಡೆಸಿದರು.
ನಿಜಕ್ಕೂ ಇದು ದುರಂತವೇ ಸರಿ. ತನ್ನ ಗೆಳೆಯರೊಂದಿಗೆ ಬಣ್ಣದ ಹಬ್ಬ ಆಡಲು ಹೋದ ಹುಡುಗ ಸಾವನ್ನಪ್ಪಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿಯೂ ನೀರವ ಮೌನ ಆವರಿಸಿಕೊಂಡಿದೆ.