ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಜೆಡಿಎಸ್ ತೊರೆದು ಮಧು ಬಂಗಾರಪ್ಪ ಕಾಂಗ್ರೆಸ್ ಸೇರುವ ಸಂಬಂಧ ಎಲ್ಲ ರೀತಿಯ ಮಾತುಕತೆಗಳು ನಡೆದಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಜೊತೆಗೆ ಚರ್ಚೆಯಾಗಿದೆ. ಈ ವೇಳೆ ಸಹೋದರಿ ಗೀತಾ ಶಿವರಾಜಕುಮಾರ ಸಹ ಕಾಂಗ್ರೆಸ್ ಸೇರುವ ಬಗ್ಗೆ ಹೇಳಿದ್ದರು. ಈಗ ಶಿವಣ್ಣ ಡಿ.ಕೆ ಶಿವಕುಮಾರ ಅವರನ್ನ ಭೇಟಿಯಾಗಿದ್ದಾರೆ.
ಈ ಬಗ್ಗೆ ಮಾತ್ನಾಡಿರುವ ಶಿವಣ್ಣ, ನಾನು ರಾಜಕೀಯ ವಿಚಾರವಾಗಿ ಭೇಟಿಯಾಗಿಲ್ಲ. ವೈಯಕ್ತಿಕ ವಿಚಾರವಾಗಿ ಭೇಟಿಯಾಗಿದ್ದೇನೆ ಎಂದಿದ್ದಾರೆ. ಇನ್ನು ಮಧು ಬಂಗಾರಪ್ಪ ಯಾವ ಪಕ್ಷ ಸೇರಿದರೂ ಒಳ್ಳೆಯದಾಗ್ಲಿ ಎಂದರು.