ತಂದೆ ಶವಸಂಸ್ಕಾರಕ್ಕೆ ಹೂವು ತರಲು ಹೊರಟವನು ಅಪಘಾತಕ್ಕೆ ಬಲಿ

241

ಪ್ರಜಾಸ್ತ್ರ ಸುದ್ದಿ

ಶಿರಸಿ: ಸರ್ಕಾರಿ ಬಸ್ ಬೈಕ್ ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಎಸ್ ಬಿಐ ಸರ್ಕಲ್ ಬಳಿ ನಡೆದಿದೆ. ಸುನೀಲ(26) ಹಾಗೂ ರವಿಚಂದ್ರ(34) ಮೃತ ವ್ಯಕ್ತಿಗಳೆಂದು ತಿಳಿದು ಬಂದಿದೆ.

ರವಿಚಂದ್ರ ತಂದೆ ಸೋಮವಾರ ನಸುಕಿನ ಜಾವ ತೀರಿಕೊಂಡಿದ್ದಾರೆ. ಶವಸಂಸ್ಕಾರಕ್ಕೆ ಹೂವು ತರಲು ಮಾರ್ಕೆಟ್ ಗೆ ಹೊರಟಿದ್ದರು. ಈ ವೇಳೆ ಸಾರಿಗೆ ಸಂಸ್ಥೆಯ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ತಂದೆ ಮಗನ ಸಾವು ಒಂದೇ ದಿನ ನಡೆದಿದ್ದು ಕುಟುಂಬಕ್ಕೆ ಬಹುದೊಡ್ಡ ಆಘಾತವನ್ನುಂಟು ಮಾಡಿದೆ.




Leave a Reply

Your email address will not be published. Required fields are marked *

error: Content is protected !!