ಕರ್ನಾಟಕದಲ್ಲಿ ಗೆಲುವಿನ ಟಾರ್ಗೆಟ್ ನೀಡಿದ ರಾಹುಲ್ ಗಾಂಧಿ

194

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಸಂಬಂಧ, ರಾಜ್ಯ ಕರ್ನಾಟಕ ಕಾಂಗ್ರೆಸ್ ಪಕ್ಷದ ನಾಯಕರಿಗೆ, ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ 156 ಸ್ಥಾನಗಳ ಟಾರ್ಗೆಟ್ ನೀಡಿದ್ದಾರೆ.

ಕೆಪಿಸಿಸಿ ನೂತನ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇಕಡ 40ರಷ್ಟು ಭ್ರಷ್ಟಾಚಾರವಿದೆ. ಪ್ರಧಾನಿ ಇಲ್ಲಿ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಜನರು ನಗುತ್ತಾರೆ. ಒಂದರೆಡು ಉದ್ಯಮಿಗಳು ಉದ್ದಾರ ಮಾಡಲು ಜನರನ್ನು ಒಡೆಯುತ್ತಿದ್ದಾರೆ. ನಾವು ಜೋಡಿಸುವ ಕೆಲಸ ಮಾಡುತ್ತೇವೆ ಎಂದರು.

ರಾಜ್ಯದಲ್ಲಿ 70 ಲಕ್ಷ ಸದಸ್ಯತ್ವ ನೋಂದಣಿಯಾಗಿದೆ. ರಾಜ್ಯದಲ್ಲಿ ನಾಯಕರುಗಳು, ಅಭ್ಯರ್ಥಿಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಪಕ್ಷ ನಿಷ್ಠೆ, ಅವರ ಕೆಲಸ ನೋಡಿ ಟಿಕೆಟ್ ನೀಡಲಾಗುವುದು. 156 ಸೀಟ್ ಗೆಲ್ಲುವುದು ಗುರಿಯಾಗಬೇಕು ಎಂದರು.




Leave a Reply

Your email address will not be published. Required fields are marked *

error: Content is protected !!