ಬೆಂಗಳೂರು: ಕರೋನಾ ಲಾಕ್ ಡೌನ್ ಭೀತಿಯಿಂದ ಕಳೆದ ಎರಡು ತಿಂಗಳಿನಿಂದ ಸಾರಿಗೆ ಸಂಚಾರ ಬಂದ್ ಮಾಡಲಾಗಿತ್ತು. ಇದನ್ನ ಇಂದು ಶುರು ಮಾಡಲಾಗಿದೆ. ಸಂಜೆ 7 ಗಂಟೆ ಲಾಸ್ಟ್ ಟೈಂ ಎಂದು ಹೇಳಲಾಗಿದೆ. ಆದ್ರೆ, ಸಂಜೆ 5 ಗಂಟೆಗೆ ಬಸ್ ಸಂಚಾರ ನಿಲ್ಲಿಸಿವೆ. ಕಾರಣ, ನಿರಸ ಪ್ರತಿಕ್ರಿಯೆ.
ರಾಜ್ಯದಲ್ಲಿ ಜಿಲ್ಲೆಗಳ ನಡುವೆ ಪ್ರತಿದಿನ 8 ಸಾವಿರ ಬಸ್ ಸಂಚಾರ ಮಾಡ್ತಿದ್ವು. ಇಂದು ಬರೀ 300 ಬಸ್ ಗಳು ಸಂಚರಿಸಿವೆ. ಆದ್ರೂ ಸಹ ಜನರು ನಿರೀಕ್ಷೆ ಮಟ್ಟದಲ್ಲಿ ಬಂದಿಲ್ಲ. ಕೋಟಿ ಕೋಟಿ ಸಂಪಾದನೆಯ ನಿರೀಕ್ಷೆ ಇಟ್ಟುಕೊಂಡಿದ್ದ ಸರ್ಕಾರಕ್ಕೆ ನಿರಾಸೆಯಾಗಿದೆ. ಹೀಗಾಗಿ ಮೊದಲ ದಿನದ ಸಂಚಾರ ಹೇಳಿಕೊಳ್ಳುವಷ್ಟು ಆಗಿಲ್ಲ. ಕಾರಣ ಕರೋನಾ ಭಯ.
ಸಂಚಾರ ಮಾಡುವುದ್ರಿಂದ ಕರೋನಾ ಹರಡುತ್ತಿದೆ ಅನ್ನೋ ಭಯದಿಂದ ಜನರು ಪ್ರಯಾಣ ಮಾಡುವುದನ್ನ ನಿಲ್ಲಿಸಿದ್ದಾರೆ. ಹೀಗಾಗಿ ಬಸ್ಸಿಗೆ 30ಜನರನ್ನ ಮಿತಿ ಹೇರಿದ್ರೂ ಜನರು ಬರ್ತಿಲ್ಲ. 8 ರಿಂದ 10 ಮಂದಿ ಬಂದ್ರೆ ಅಪರೂಪವಾಗಿದೆ.