ಪ್ರಜಾಸ್ತ್ರ ಸುದ್ದಿ
ಹಾಸನ: ಸಾರಿಗೆ ನೌಕರರ ಕುಟುಂಬಸ್ಥರು ತಹಶೀಲ್ದಾರ್, ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸುವ ಮೂಲಕ ಹೋರಾಟವನ್ನ ತೀವ್ರಗೊಳಿಸಿದ್ದಾರೆ. ಇದರ ನಡುವೆಯೂ 2 ಸಾವಿರಕ್ಕೂ ಹೆಚ್ಚು ಬಸ್ ಗಳು ಓಡಾಟ ಶುರು ಮಾಡಿವೆ. ಇದರ ಹೊರ್ತಾಗಿಯೂ ಹಾಸನ ಬಸ್ ನಿಲ್ದಾಣದಲ್ಲಿ ಸಿಬ್ಬಂದಿಯೊಬ್ಬರು ವಿಷ ಸೇವಿಸಿದ್ದಾರೆ.
ನಿರ್ವಾಹಕ ಕಂ ಚಾಲಕ ಆಗಿರುವ ಪಾಲಾಕ್ಷ(40) ಅನ್ನೋ ಸಿಬ್ಬಂದಿ ನಿಲ್ದಾಣದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಅವರು ನನ್ನ ಸಾವಿಗೆ ಸುಬ್ಬರಾಯ ಕಾರಣ. ಅವರಿಂದಲ್ಲೇ ನೌಕರರ ಮನೆ ಹಾಳಾಗಿದೆ ಎಂದು ಕಿರುಚಾಡಿದ್ದಾರೆ.